
ಸ್ಫೂರ್ತಿದಾಯಕ ಭಾಷಣ ಮಾಡಿ ಇಸ್ರೋಗೆ ಬಲ ತುಂಬಿದ ಪ್ರಧಾನಿ: ಮೋದಿ ಭಾಷಣದ ಹೈಲೈಟ್ಸ್
* ಭಾರತ ತಲೆ ಎತ್ತಿ ನಡೆಯುವಂತಹ ಕೆಲಸ ಮಾಡಿದ್ದೀರಿ, ನಿಮ್ಮ ಇಡೀ ಜೀವನವನ್ನು ಇದಕ್ಕಾಗಿಯೇ ಮುಡಿಪಿಟ್ಟಿದ್ದೀರಿ
* ನಿಮ್ಮನ್ನು ಈ ದೇಶ ಎಂದಿಗೂ ನೆನಪಿನಲ್ಲಿ ಇಟ್ಟುಕೊಳ್ಳಲಿದೆ. ನಿನ್ನೆ ರಾತ್ರಿ ನಿಮ್ಮೊಂದಿಗೆ ಇದ್ದೆ, ನಿಮ್ಮ ಕಣ್ಣುಗಳ ನಿರೀಕ್ಷೆ ಅರ್ಥವಾಗಿದೆ. ನಿಮ್ಮ ಜೊತೆ ಮಾತಾಡಿ ಹೋಗಲೇಬೆಕೆಂದು ತೀರ್ಮಾನಿಸಿದೆ
* ನೀವು ಭಾರತ ಮಾತೆಯ ಜಯಕ್ಕೋಸ್ಕರ ಹೋರಾಡುವವರು, ನಿಮ್ಮ ದುಗುಡದ ಕ್ಷಣಗಳೊಂದಿಗೆ ನಾನು ನಿಮ್ಮೊಂದಿಗೆ ಇದ್ದೆ. ದುಗುಡದ ಜೊತೆಗೆ ಗೆದ್ದೇ ಗೆಲ್ಲುವ ನಿಮ್ಮ ಛಲವನ್ನು ಕಂಡೆ
* ಇವತ್ತು ಕೆಲ ಅಡ್ಡಿಗಳಾಗಿವೆ, ಅಡ್ಡಿ ಎಂದಿಗೂ ನಮ್ಮ ದೌರ್ಬಲ್ಯ ಅಲ್ಲ, ಈ ಅಡ್ಡಿಗೆ ಬೆದರಿ ನಾವು ನಮ್ಮ ಯಾನ ನಿಲ್ಲಿಸುವುದಿಲ್ಲ. ಸಾಹಿತಿಗಳು ಮತ್ತು ಕಲಾವಿದರು ಚಂದ್ರನ ಬಗ್ಗೆ ಕಲ್ಪನೆ ಕಟ್ಟಿಕೊಟ್ಟಿದ್ರು.
"
ಇಸ್ರೋ ಚಂದ್ರಯಾನ ಲ್ಯಾಂಡರ್ ಸಂಪರ್ಕ ಕಡೇ ಕ್ಷಣದಲ್ಲಿ ಕಡಿತ!
* ಸಾಹಿತಿಗಳ ಕಲ್ಪನೆಯನ್ನು ನಿಜ ಮಾಡಲು ಹೊರಟವರು ನೀವು, ನಿಮ್ಮ ಕನಸಿನ ಹಾದಿಯಲ್ಲಿ ಕೆಲವು ಅಡೆತಡೆಗಳು ಬಂದಿವೆ. ರಾತ್ರಿಯಿಡೀ ನೀವು ನಿದ್ದೆ ಮಾಡಿಲ್ಲ ನನಗೆ ಗೊತ್ತಿದೆ.
* ಯಾಕೆ ಹೀಗಾಯಿತು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದ. ನಿಮಗಷ್ಟೇ ಅಲ್ಲ, ದೇಶದ ಜನರಿಗೂ ಅರ್ಥವಾಗುತ್ತದೆ. ಯಾವತ್ತೂ ಎದೆಗುಂದಬೇಡಿ. ಇಂದಲ್ಲ ಮುಂದೆಯೂ ಅಷ್ಟೇ
* ಈ ಚಂದ್ರಯಾನ ಕೇವಲ ಭಾರತಕ್ಕಷ್ಟೇ ಅಲ್ಲ, ಜಗತ್ತಿಗೆ ಅಗತ್ಯ. ನಮಗೆ ನಮ್ಮ ಬಾಹ್ಯಾಕಾಶ ವಿಜ್ಞಾನಿಗಳ ಮೇಲೆ ವಿಶ್ವಾಸವಿದೆ. ಹೊಸ ಹೊಸ ಸಂಶೋಧನೆಗಳಿಗೆ ಭಾರತ ತೆರೆದುಕೊಳ್ಳಲಿದೆ
* ಇಸ್ರೋ ವಿಜ್ಞಾನಿಗಳೇ.. ಭಾರತ ನಿಮ್ಮೊಂದಿಗೆ ಯಾವಾಗ್ಲೂ ಇದೆ. ಭಾರತ ನಿಮಗೆ ಹೆಮ್ಮೆಯಿಂದ ಇನ್ನಷ್ಟು ಅವಕಾಶಗಳನ್ನು ನೀಡಲಿದೆ. ಜಗತ್ತಿನ ಬೇರೆ ಯಾರೂ ಮಾಡದ ಸಾಧನೆಗೆ ನೀವು ಕೈ ಹಾಕಿದ್ದೀರಿ
* ಭಾರತ ನಿಮ್ಮ ಸೇವೆಯನ್ನೂ ಎಂದೆಂದೂ ನೆನಪಿನಲ್ಲಿ ಇಡಲಿದೆ. ಈ ಅಡ್ಡಿಗಳಿಗೆ ಎದೆಗುಂದೆ ನೀವು ಮುನ್ನುಗ್ಗಿ. ವಿಜ್ಞಾನಿಗಳ ಕುಟುಂಬ ಸದಸ್ಯರ ಸಹಕಾರವೂ ಈ ಯಾನದ ಯಶಸ್ಸಿಗೆ ಕಾರಣ
* ಇಷ್ಟೆಲ್ಲ ದಾಳಿಯಾದ್ರೂ ನಮ್ಮ ಉತ್ಸಾಹವನ್ನು ಕುಗ್ಗಿಸಲು ಆಗಿಲ್ಲ. ಸೋಲುಗಳಿಗೆ ಎದೆಗುಂದುವ ಜಾಯಮಾನ ಭಾರತದ್ದಲ್ಲ. ಈ ಯಾನ ನಮ್ಮನ್ನು ಇನ್ನಷ್ಟು ಉತ್ತಮ ಮತ್ತು ಶಕ್ತಿಯುತಗೊಳಿಸಲಿದೆ
* ಅತೀ ಶೀರ್ಘದಲ್ಲೇ ಗೆಲುವು ನಮ್ಮದಾಗಲಿದೆ. ನಿರಂತರ ಪ್ರಯತ್ನ ಮುಂದುವರೆಸಿ, ನಾವೆಲ್ಲರೂ ಗೆಲ್ಲೋಣ. ನಿಮ್ಮೆಲ್ಲರ ಶ್ರಮ ಹಾಗೂ ಪ್ರಯತ್ನಕ್ಕೆ ದೇಶ ಗರ್ವ ಪಡುತ್ತದೆ
* ನಿಮ್ಮ ಎಲ್ಲ ಪ್ರಯತ್ನಗಳ ಜೊತೆ ಸದಾ ನಾನು ಇರುತ್ತೇನೆ. ಪ್ರತೀ ಸೋಲು, ಸವಾಲು ಹೊಸ ಎತ್ತರಕ್ಕೆ ಕರೆದೊಯ್ಯುತ್ತದೆ. ಮುಂದಿನ ಗೆಲುವು ನಮ್ಮದೇ ಅನ್ನೋದು ಇದರೊಂದಿಗೆ ಗೊತ್ತಾಗುತ್ತೆ
* ವಿಜ್ಞಾನಕ್ಕೆ ಸೋಲು ಅನ್ನೋದೇ ಇಲ್ಲ, ಪ್ರಯತ್ನಗಳಷ್ಟೇ ಗೊತ್ತು. ಪ್ರತೀ ಪ್ರಯತ್ನವು ಹೊಸ ಜ್ಞಾನವನ್ನು ನೀಡುತ್ತದೆ. ಚಂದ್ರಯಾನ ನಿರೀಕ್ಷೆಯಲ್ಲಿ ಸ್ವಲ್ಪ ಎಡವಿದ್ರೂ ಸೋಲಾಗಿಲ್ಲ
* ಇಡೀ ದೇಶ ಆನಂದದಿಂದ ಇದೆ, ಜೊತೆಗೆ ಎಲ್ಲರೂ ಗರ್ವ ಪಟ್ಟಿದ್ದಾರೆ. ನಾನು ಎಲ್ಲೇ ಇದ್ದರೂ ಚಂದ್ರಯಾನದ ಮಾಹಿತಿ ಪಡೆದುಕೊಳ್ತಿದ್ದೆ. ವರ್ಷಗಟ್ಟಲೇ ನಿಮ್ಮ ಪ್ರಯತ್ನಗಳ ಅರಿವು ನನ್ನಲ್ಲಿದೆ
* ಇಸ್ರೋ ಮೊದಲ ಯತ್ನದಲ್ಲೇ ಮಂಗಳ ಗ್ರಹದಲ್ಲಿ ತಿರಂಗಾ ಹಾರಿಸಿದೆ. ಚಂದ್ರನಲ್ಲಿ ನೀರಿದೆ ಎಂದು ಮೊದಲು ಜಗತ್ತಿಗೆ ತಿಳಿಸಿದ್ದು ಭಾರತ. ಈ ಚಂದ್ರಯಾನವು ಹೊಸದನ್ನು ಹೇಳಲು ಹೊರಟಿದೆ
* ನಮ್ಮ ಅಮೃತ ಸಂತಾನ, ಅಮೃತ ಸಂತಾನಕ್ಕೆ ಸೋಲು ಇಲ್ಲ, ನಿರಾಸೆಯೂ ಇಲ್ಲ. ಗುರಿ ತಲುಪುವ ತನಕ ನಿರಂತರವಾಗಿ ಮುನ್ನಡೆಯೋಣ. ನಮ್ಮ ಪ್ರತೀ ಯಾನದಲ್ಲೂ ದೇಶ ನಮ್ಮೋದಿಗೆ ಇರುತ್ತೆ, ತಡೆಯೋರು ಯಾರೂ ಇಲ್ಲ
ಆತಂಕ ಉಂಟು ಮಾಡಿದ ಚಂದ್ರಯಾನದ ಕೊನೆಯ 15 ನಿಮಿಷ: ಚಿತ್ರಪಯಣ
* ಮುಂದಿನ ಎಲ್ಲ ಯೋಜನೆಗಳಿಗೆ ಶುಭಾಶಯ ಸಲ್ಲಿಸಿದೆ. ವಿಜ್ಞಾನ ಪರಿಣಾಮಗಳ ಬಗ್ಗೆ ಯೋಚಿಸುವುದಿಲ್ಲ, ಪ್ರಯತ್ನಗಳ ಬಗ್ಗೆಯಷ್ಟೇ ಯೋಚನೆ. ನಿಮ್ಮಿಂದ ಪ್ರೇರಣೆ ಪಡೆಯಲೆಂದು ಬೆಳ್ಳಂಬೆಳಗ್ಗೆ ನಿಮ್ಮನ್ನು ನೋಡಲು ಬಂದೆ
* ಇಸ್ರೋ ವಿಜ್ಞಾನಿಗಳು ಪ್ರೇರಣೆಯ ಸಾಗರ, ಅವರೇ ನಮ್ಮ ಸ್ಫೂರ್ತಿ. ನಿರಾಸೆಯನ್ನೇ ಆಸೆಯಾಗಿ ಬದಲಿಸುವ ಶಕ್ತಿ ಇಸ್ರೋ ವಿಜ್ಞಾನಿಗಳದ್ದು, ಇಸ್ರೋದ ಎಲ್ಲ ವಿಜ್ಞಾನಿಗಳಿಗೂ ಶುಭಾಶಯ & ಧನ್ಯವಾದ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.