ಮಹಾಮಳೆಗೆ ಬೋಟ್ ಮುಳುಗಡೆ; ಮುಂದುವರೆದ ಶೋಧ ಕಾರ್ಯ

Published : May 30, 2018, 09:59 AM ISTUpdated : May 31, 2018, 01:47 PM IST
ಮಹಾಮಳೆಗೆ ಬೋಟ್ ಮುಳುಗಡೆ; ಮುಂದುವರೆದ ಶೋಧ ಕಾರ್ಯ

ಸಾರಾಂಶ

ಕರಾವಳಿ ಪ್ರದೇಶದಲ್ಲಿ ಬಾರೀ ಮಳೆಯಾಗುತ್ತಿದ್ದು ಹೊನ್ನಾವರ ಸಮೀಪ ತಮಿಳುನಾಡು ಮೂಲದ ಏಂಜಲ್ ಎನ್ನುವ ಬೋಟ್ ಮುಳುಗಡೆಯಾಗಿದೆ. ಬೋಟ್ ನಲ್ಲಿ ಆರು ಜನ ಮೀನುಗಾರರಿದ್ದರು. ಸ್ಥಳೀಯ ಮೀನುಗಾರಿಕಾ ಬೋಟ್ ನಾಲ್ವರನ್ನ ರಕ್ಷಣೆ ಮಾಡಿದ್ದು  ಇಬ್ಬರು ಮೀನುಗಾರರು ನಾಪತ್ತೆಯಾಗಿದ್ದಾರೆ.  

ಮಂಗಳೂರು (ಮೇ. 30): ಕರಾವಳಿ ಪ್ರದೇಶದಲ್ಲಿ ಬಾರೀ ಮಳೆಯಾಗುತ್ತಿದ್ದು ಹೊನ್ನಾವರ ಸಮೀಪ ತಮಿಳುನಾಡು ಮೂಲದ ಏಂಜಲ್ ಎನ್ನುವ ಬೋಟ್ ಮುಳುಗಡೆಯಾಗಿದೆ. ಬೋಟ್ ನಲ್ಲಿ ಆರು ಜನ ಮೀನುಗಾರರಿದ್ದರು. ಸ್ಥಳೀಯ ಮೀನುಗಾರಿಕಾ ಬೋಟ್ ನಾಲ್ವರನ್ನ ರಕ್ಷಣೆ ಮಾಡಿದ್ದು  ಇಬ್ಬರು ಮೀನುಗಾರರು ನಾಪತ್ತೆಯಾಗಿದ್ದಾರೆ. 

ಡೋಯನಿಯರ್ ಹೆಲಿಕಾಪ್ಟರ್ ಮೂಲಕ  ಆಳ‌ ಸಮುದ್ರದಲ್ಲಿ ಬೋಟ್ ಶೋಧ ಕಾರ್ಯ ಮುಂದುವರೆದಿದೆ.  ಪುಷ್ಪರಾಜ್(44), ಅನುರಾಜ್(25) ಎಂಬುವವರು ನೀರಿನಲ್ಲಿ ನಾಪತ್ತೆಯಾಗಿದ್ದಾರೆ.  ನಾಪತ್ತೆಯಾದ ಮೀನುಗಾರರಿಗಾಗಿ ಇಂದು ಶೋಧ ಕಾರ್ಯ ಮುಂದುವರೆದಿದೆ.  ಐಸಿಜಿ ಅಮಲ್ ಮತ್ತು ಐಸಿಜಿ ಸಾವಿತ್ರಿ ಬಾಯಿ ಪುಲೆ ಬೋಟ್ ಮೂಲಕವೂ ಶೋಧ ಕಾರ್ಯ ನಡೆಯುತ್ತಿದೆ. 

ನಿನ್ನೆ ಎಂಜಲ್ 2 ನಲ್ಲಿ ರಕ್ಷಿಸಲ್ಪಟ್ಟ 11 ಮೀನುಗಾರರು ರಾತ್ರಿ ಪರಾರಿಯಾಗಿದ್ದರು. ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಮತ್ತೆ ಹಿಡಿದು ತಂದಿದ್ದಾರೆ.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ ಎಂದ ಪಾಕಿಸ್ತಾನ ಸೇನೆ, ಕೋಲಾಹಲ ಶುರು