500 ಕೋಟಿಯ ಬಾಂಬ್ ಸಿಡಿಸಿದ ಹೆಚ್'ಡಿಕೆ !

Published : Mar 23, 2017, 11:45 AM ISTUpdated : Apr 11, 2018, 12:53 PM IST
500 ಕೋಟಿಯ ಬಾಂಬ್ ಸಿಡಿಸಿದ  ಹೆಚ್'ಡಿಕೆ !

ಸಾರಾಂಶ

ಈ ಸಂಬಂಧ ರಾಜ್ಯ ಮತ್ತು  ರಾಷ್ಟ್ರ ನಾಯಕರ ಜೊತೆ ಚರ್ಚೆ ಕೂಡ ಆಗಿದೆ ಅಂತ ಬಾಂಬ್ ಸಿಡಿಸಿದರು.

ಬೆಂಗಳೂರು(ಮಾ.23): ಎಚ್​.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸ್ಫೋಟಿಸಿದ್ದಾರೆ. ಅದೂ ಅಂತಿಂಥ ಬಾಂಬ್ ಅಲ್ಲ. ಬರೋಬ್ಬರಿ 500 ಕೋಟಿಯ ಬಾಂಬ್​. ಅದೂ ಕಾಂಗ್ರೆಸ್ ಪಕ್ಷದ ವಿರುದ್ಧ ಅಲ್ಲ. ಬಿಜೆಪಿ ಹಾಗೂ ಪಕ್ಷದ ಮುಖಂಡರ ವಿರುದ್ಧ. ಬೆಂಗಳೂರಿನ ಸ್ವಾಭಿಮಾನಿ ಸಮಾವೇಶದಲ್ಲಿ ಮಾತಾಡಿದ ಎಚ್​​ಡಿಕೆ, ಮುಂದಿನ ವಿಧಾನಸಭಾ ಚುನಾವಣೆ ಜನಾರ್ದನ ರೆಡ್ಡಿ 500 ಕೋಟಿ ಖರ್ಚು ಮಾಡ್ತಿದ್ದಾರೆ. ಈ ಸಂಬಂಧ ರಾಜ್ಯ ಮತ್ತು  ರಾಷ್ಟ್ರ ನಾಯಕರ ಜೊತೆ ಚರ್ಚೆ ಕೂಡ ಆಗಿದೆ ಅಂತ ಬಾಂಬ್ ಸಿಡಿಸಿದರು. ಯಾಕಂದರೆ ಇತ್ತೀಚೆಗೆ ಅಷ್ಟೇ ಜಾರಿ ನಿರ್ದೇಶನಾಲಯದ ರೆಡ್ಡಿ ವಿರುದ್ಧದ 900 ಕೋಟಿ ಆಸ್ತಿ ಪ್ರಕರಣವನ್ನ ರದ್ದು ಮಾಡಿತ್ತು. ಈ ಬೆನ್ನಲ್ಲೇ ಇಷ್ಟು ಬೆಳವಣಿಗೆ ನಡೆದಿದೆ ಅಂತ ಕೊಟ್ಟ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಫೇಕ್ ನ್ಯೂಸ್ ಹರಡಿದರೇ ಐಟಿ ಸಚಿವ ಪ್ರಿಯಾಂಕ್ ಖರ್ಗೆ?: ಬಿಜೆಪಿ ಕಿಡಿ, ಬೇಷರತ್ ಕ್ಷಮೆಗೆ ಆಗ್ರಹ
ಭಾರತದಲ್ಲಿ ಮೊಳಗಿದ ಬಾಯ್ಕಾಟ್ ಥಾಯ್ಲೆಂಡ್ ಕೂಗು, ವಿಷ್ಣಮೂರ್ತಿ ಧ್ವಂಸಕ್ಕೆ ಆಕ್ರೋಶ