
ಬೆಂಗಳೂರು(ಸೆ.28): ನನ್ನ ರಾಜಕೀಯ ಜೀವನದಲ್ಲಿ ಲೋಕಸಭೆಯಲ್ಲಿ ಯಾವತ್ತು ಅತ್ತಿರಲಿಲ್ಲ. ಆದರೆ ಮೊದಲ ಬಾರಿಗೆ ಅತ್ತಿದ್ದು ಕಾವೇರಿ ವಿಷಯದಲ್ಲಿ ಭಾಷಣ ಮಾಡುವಾಗ ಎಂದು ತಿಳಿಸಿದ್ದಾರೆ.
ಲೋಕಸಭೆ ಅಧಿವೇಶನದಲ್ಲಿ ಕಾವೇರಿ ವಿಷಯದಲ್ಲಿ ಭಾಷಣ ಮಾಡುವಾಗ ನಾನು ಮೊದಲ ಬಾರಿಗೆ ಅತ್ತಿದ್ದೆ. ಈ ವಯಸ್ಸಿನಲ್ಲೂ ನಾನು ಅಳಬೇಕೇ? ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಮೆಟ್ಟೂರುನಲ್ಲಿ 50 ಟಿಎಂಸಿ ನೀರಿದೆ. ಇಲ್ಲಿ ಕುಡಿಯೋದಕ್ಕೆ ನೀರಿಲ್ಲ. ಮೂರು ದಿನ ನೀರು ಬಿಡದೇ ಇದ್ದರೆ ತಮಿಳುನಾಡಿನ ರೈತರ ಬೇಳೆ ಒಣಗಿ ಹೋಗ್ತಾ ಇರಲಿಲ್ಲ ಎಂದು ಸುಪ್ರಿಂ ಕೋರ್ಟ್'ಗೆ ಪರೋಕ್ಷವಾಗಿ ದೇವೇಗೌಡರು ಚಾಟಿ ಬೀಸಿದ್ದಾರೆ.
ಕಾವೇರಿ ವಿಚಾರವಾಗಿ ರಾಜ್ಯ ಪರ ವಕೀಲ ಮೋಹನ್ ಕಾತರಕಿ ಜೊತೆ ದೂರವಾಣಿ ಸಂಭಾಷಣೆ ನಡೆಸಿದ ದೇವೇಗೌಡರು ಮುಂದಿನ ವಿಚಾರಣೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಸಮರ್ಥವಾಗಿ ವಾದ ಮಂಡಿಸುವಂತೆ ತಿಳಿಸಿದ್ದಾರೆ.
ಕಾವೇರಿ ತೀರ್ಪಿಗೆ ತೀರ್ವ ಬೇಸರಗೊಂಡಿರುವ ದೇವೇಗೌಡರು ಯಾರನ್ನೇ ಆಗಲಿ ಗೋಡೆಯ ತನಕ ತಳ್ಳಬಹುದು. ಆಮೇಲೆ ಅವರು ತಿರುಗಿಬೀಳುತ್ತಾರೆ. ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ನ್ಯಾಯಾಧೀಶರ ಬಗ್ಗೆಯೂ ಅನುಮಾನ ವ್ಯಕ್ತಪಡಿಸಲ್ಲ. ತಮಿಳುನಾಡಿನ ಹಠ ನೀರು ಬಿಡಿಸಲೇಬೇಕು ಅಂತಾ. ಆಸ್ಪತ್ರೆಯಲ್ಲೇ ಮಲಗಿಕೊಂಡು ತೀರ್ಪನ್ನು ಅಭಿನಂದಿಸುತ್ತಾರೆ ಎಂದು ತಮ್ಮ ಜಯಲಲಿತಾ ಪರೋಕ್ಷವಾಗಿ ಟೀಕಿಸಿದರು.
ಮೂರು ದಿನಗಳ ಕಾಲ ಕಾಯುವ ವ್ಯವದಾನ ಸುಪ್ರಿಂಕೋರ್ಟಿ'ಗೆ ಇರಲಿಲ್ವೆ. ಸಾಮನ್ಯ ವ್ಯಕ್ತಿ ಇಂತಹ ಯೋಚನೆ ಮಾಡುತ್ತೇನೆ ಅಂದರೆ ಸುಪ್ರೀಂಕೋರ್ಟ್'ಗೆ ಇರಲಿಲ್ವಾ. ಪರೋಕ್ಷವಾಗಿ ಸುಪ್ರಿಂ ನಡೆಗೆ ಅಸಮಾಧಾನವ್ಯಕ್ತಪಡಿಸಿದರು. ಬಿಜೆಪಿಯವರು ಸರ್ವ'ಪಕ್ಷ ಸಭೆಗೆ ಬಂದಿದ್ದು ಸಂತೋಷ. ನೀರು ಬಿಡದಿರುವ ಬಗ್ಗೆ ನಿಲುವು ತಗೆದುಕೊಂಡಿದ್ದನ್ನು ಅಭಿನಂದಿಸುತ್ತೇನೆ. ಕಾವೇರಿ ವಿಚಾರವಾಗಿ ನಾಳೆ ಕೇಂದ್ರದ ಮದ್ಯಸ್ಥಿಕೆಯಲ್ಲಿ ನಡೆಯುವ ಸಭೆಗೆ ನನಗೆ ಆಹ್ವಾನ ಇಲ್ಲ ಹಾಗಾಗಿ ನಾನು ಸಭೆಗೆ ಹೋಗಲ್ಲ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.