
ನವದೆಹಲಿ: ಅಂತರ್ ಧರ್ಮೀಯ ದಂಪತಿ ತಮ್ಮ ಮಗುವಿಗೆ ಹೆಸರು ಇಡುವ ವಿಚಾರದಲ್ಲಿ ಜಗಳಾಡಿಕೊಂಡಿದ್ದು, ಕೊನೆಗೆ ನ್ಯಾಯಾಧೀಶರೇ ಮಗುವಿಗೆ ಹೆಸರು ಸೂಚಿಸಿ ಪ್ರಕರಣ ಇತ್ಯರ್ಥಪಡಿಸಿದ ಅಪರೂಪದ ಪ್ರಸಂಗ ಕೇರಳ ಹೈಕೋರ್ಟ್ನಲ್ಲಿ ನಡೆದಿದೆ.
ಹಿಂದು ಮತ್ತು ಕ್ರೈಸ್ತ ಧರ್ಮದ ದಂಪತಿ ಮಧ್ಯೆ ತಮ್ಮ ಎರಡನೇ ಮಗುವಿಗೆ ಹೆಸರು ನೀಡುವ ವಿಚಾರದಲ್ಲಿ ಮನಸ್ತಾಪ ಉಂಟಾಗಿತ್ತು.
ಮಗುವಿಗೆ ಹೆಸರು ಇಡಲು ದಂಪತಿ ಒಮ್ಮತಕ್ಕೆ ಬರದೇ ಇದ್ದ ಕಾರಣಕ್ಕೆ ನಗರಪಾಲಿಕೆ ಜನನ ಪ್ರಮಾಣಪತ್ರ ನೀಡಲು ನಿರಾಕರಿಸಿತ್ತು. ಕೊನೆಗೆ ಕೇಸು ಹೈಕೋರ್ಟ್ ಮೆಟ್ಟಿಲೇರಿತ್ತು. ಮಗುವಿಗೆ ಜಾನ್ ಮಣಿ ಸಚಿನ್ ಎಂಬ ಹೆಸರಿಡಬೇಕು ಎಂಬುದು
ತಾಯಿಯ ಇಚ್ಛೆಯಾಗಿದ್ದರೆ, ಅಭಿನವ್ ಸಚಿನ್ ಎಂದು ಹೆಸರಿಡಬೇಕು ಎಂದು ತಂದೆಯ ಬೇಡಿಕೆಯಾಗಿತ್ತು.
ಇಬ್ಬರ ಹೆಸರನ್ನು ಪರಿಗಣಿಸಿದ ನ್ಯಾಯಾಧೀಶರು ಮಗುವಿಗೆ ‘ಜಾನ್ ಸಚಿನ್’ ಎಂಬ ಹೆಸರನ್ನು ಸೂಚಿಸಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.