
ದಾಮೋಹ್ (ಮ.ಪ್ರ.): ಮಧ್ಯ ಪ್ರದೇಶದಲ್ಲಿ ಬರಗಾಲ ಯಾವ ಮಟ್ಟಿಗೆ ಬಂದು ತಲುಪಿದೆ ಎಂದರೆ ಕನಿಷ್ಠ ಪಕ್ಷ ಶೌಚಕ್ಕೂ ನೀರಿಲ್ಲದ ಸ್ಥಿತಿ ಎದುರಾಗಿದೆ. ದಾಮೋಹ್ ಜಿಲ್ಲೆಯ ಗ್ರಾಮದ ಹಾಸ್ಟೆಲ್ ಒಂದರಲ್ಲಿನ ಬಾಲಕಿಯರು ಇದರಿಂದ ಪಡಬಾರದ ಪಾಡು ಪಡುತ್ತಿದ್ದು, ಶೌಚಾಲಯ ಕ್ಕೆಂದು 2 ಕಿಲೋಮೀಟರ್ ಕಾಲ್ನಡಿಗೆ ಯಲ್ಲಿ ಸಂಚರಿಸಬೇಕಿದೆ. ಹೌದು. ಆಘಾತಕಾರಿ.
ನಂಬಲನರ್ಹ ಎನ್ನಿಸಿದರೂ ಇದು ಸತ್ಯ. ನಿತ್ಯ ಈ ಹಾಸ್ಟೆಲ್ನಲ್ಲಿನ ಬಾಲಕಿಯರು ತಮ್ಮ ಶಾಲಾ ಶಿಕ್ಷಕಿ ಹಾಗೂ ಇತರ ಸಹಾಯಕಿಯರ ಜತೆ 2 ಕಿಲೋಮೀ ಟರ್ನಷ್ಟು ದೂರ ಬಕೆಟ್ ಹಿಡಿದು ಸಂಚರಿಸುತ್ತಾರೆ. ಹಾಸ್ಟೆಲ್ ಸುತ್ತಲಿನ 2 ಬೋರ್ವೆಲ್ಗಳು ಬತ್ತಿ ಹೋಗಿವೆ. ಹೀಗಾಗಿ ಹಾಸ್ಟೆಲ್ಗೆ ನೀರು ಪೂರೈಕೆ ಬಂದ್ ಆಗಿದೆ. ಕೊಳವೆಬಾವಿ ಬತ್ತಿದಾಗ ಟ್ಯಾಂಕರ್ ಮೂಲಕ ಈ ಹಿಂದೆ ನೀರು ಪೂರೈಕೆ ಆಗಿತ್ತು.
ಆದರೆ ಈ ಸಲ ಆಗಿಲ್ಲ ಎಂದು ಬಾಲಕಿಯರು ಅಳಲು ತೋಡಿಕೊಂಡಿದ್ದಾರೆ. ಈ ವಿಷಯ ಈಗ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದ್ದು, ಶೀಘ್ರ ಸಮಸ್ಯೆ ಇತ್ಯರ್ಥ ಮಾಡುವುದಾಗಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.