
ನವದೆಹಲಿ(ಆ.20):ಹರ್ಯಾಣ ನಾಗರಿಕ ಸೇವೆಗಳ (ನ್ಯಾಯಾಂಗ ವಿಭಾಗ) ಪರೀಕ್ಷೆಯ ಪ್ರಶ್ನೆ ಪತ್ರಿಕೆಗೆ ಮಧ್ಯವರ್ತಿಗಳು 1 ಕೋಟಿ ರು. ಬೆಲೆ ನಿಗದಿಪಡಿಸಿದ್ದ ಸಂಗತಿ ಹರ್ಯಾಣದಲ್ಲಿ ಬೆಳಕಿಗೆ ಬಂದಿದ್ದು, ಪ್ರಕರಣ ಇದೀಗ ಕೋರ್ಟ್ ಮೆಟ್ಟಿಲೇರಿದೆ.
ಕಳೆದ ಜು.16ರಂದು ಪರೀಕ್ಷೆ ನಿಗದಿಯಾಗಿತ್ತು. ಸುಮನ್ ಎಂಬಾಕೆ ಅಭ್ಯರ್ಥಿಯಾಗಿದ್ದರು. ಅವರನ್ನು ಸುಶೀಲಾ ಹಾಗೂ ಸುನೀತಾ ಎಂಬ ಇಬ್ಬರು ಸಂಪರ್ಕಿಸಿ, ಪ್ರಶ್ನೆ ಪತ್ರಿಕೆ ಬೇಕು ಎಂದರೆ 1 ಕೋಟಿ ರು.ನೀಡುವಂತೆ ಹೇಳಿದ್ದರು. ಅಲ್ಲದೆ ಅವರು ಜು.15ರಂದು ಕನಿಷ್ಠ ಎರಡು ಪ್ರಶ್ನೆಗಳನ್ನು ನೀಡಿದ್ದರು.
ಮರುದಿನ ಪರೀಕ್ಷೆಯಲ್ಲಿ ಆ ಪ್ರಶ್ನೆಗಳೂ ಇದ್ದವು ಎಂದು ಸ್ವತಃ ಸುಮನ್ ಅವರೇ ಹರ್ಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಜೆ. ವಜಿಫ್'ದಾರ್ ಅವರಿಗೆ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಆಂತರಿಕ ತನಿಖೆಗೆ ಮುಖ್ಯ ನ್ಯಾಯಮೂರ್ತಿ ಆದೇಶಿಸಿದ್ದಾರೆ. ಈ ನಡುವೆ, ಏಕಸದಸ್ಯ ಪೀಠ ಕೂಡ ಈ ಬಗ್ಗೆ ವಿಚಾರಣೆ ಆರಂಭಿಸಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.