ಉತ್ಕಾಲ್ ದುರಂತ: ಕೂಲಂಕುಷ ವರದಿ ನೀಡಲು ರೈಲ್ವೇ ಮಂಡಳಿಗೆ ಸುರೇಶ್ ಪ್ರಭು ಸೂಚನೆ

Published : Aug 20, 2017, 04:00 PM ISTUpdated : Apr 11, 2018, 12:57 PM IST
ಉತ್ಕಾಲ್ ದುರಂತ: ಕೂಲಂಕುಷ ವರದಿ ನೀಡಲು ರೈಲ್ವೇ ಮಂಡಳಿಗೆ ಸುರೇಶ್ ಪ್ರಭು ಸೂಚನೆ

ಸಾರಾಂಶ

ನಿನ್ನೆ ನಡೆದ ಉತ್ಕಾಲ್ ರೈಲು ದುರಂತದ ಬಗ್ಗೆ ಕೂಲಂಕುಷವಾಗಿ ವಿವರ ನೀಡುವಂತೆ ರೈಲ್ವೇ ಸಚಿವ ಸುರೇಶ್ ಪ್ರಭು ರೈಲ್ವೇ ಮಂಡಳಿಗೆ ಸೂಚಿಸಿದ್ದಾರೆ.

ನವದೆಹಲಿ (ಆ.20): ನಿನ್ನೆ ನಡೆದ ಉತ್ಕಾಲ್ ರೈಲು ದುರಂತದ ಬಗ್ಗೆ ಕೂಲಂಕುಷವಾಗಿ ವಿವರ ನೀಡುವಂತೆ ರೈಲ್ವೇ ಸಚಿವ ಸುರೇಶ್ ಪ್ರಭು ರೈಲ್ವೇ ಮಂಡಳಿಗೆ ಸೂಚಿಸಿದ್ದಾರೆ.

ಅಪಘಾತಕ್ಕೆ ಕಾರಣಗಳೇನು? ಎಲ್ಲಿ ವೈಫಲ್ಯವಾಗಿದೆ ಎನ್ನುವುದರ ಸಂಪೂರ್ಣ ವರದಿ ನೀಡಲು ಸೂಚಿಸಿದ್ದಾರೆ.

ಅಪಘಾತದ ನಂತರ ಸ್ಥಳವನ್ನು ಅತ್ಯಂತ ಸಮೀಪದಿಂದ ಅವಲೋಕಿಸಿದ್ದೇನೆ. ಹಳಿಗಳ ರಿಪೇರಿ ಕೆಲಸ ತ್ವರಿತವಾಗಿ ನಡೆಯುತ್ತಿದೆ. ಗಾಯಗೊಂಡವರಿಗೆ ಉತ್ತಮ ವೈದ್ಯಕೀಯ ಸೇವೆ ನೀಡಲಾಗುವುದು ಎಂದು ಸುರೇಶ್ ಪ್ರಭು ಭರವಸೆ ನೀಡಿದ್ದಾರೆ.

ರೈಲು ದುರಂತಕ್ಕೆ ನಿರ್ಲಕ್ಷವೇ ಕಾರಣ ಎನ್ನಲಾಗುತ್ತಿದೆ. ಇಬ್ಬರು ರೈಲ್ವೇ ಸಿಬ್ಬಂದಿಗಳಿಬ್ಬರ ಟೆಲಿಫೋನ್ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರ ಸತ್ಯಾಸತ್ಯತೆ ಇನ್ನೂ ಅಧಿಕೃತಗೊಂಡಿಲ್ಲ. ಕಾಮಗಾರಿ ನಡೆಯುತ್ತಿದೆ ಹಾಗಾಗಿ ಸುಮ್ಮನೆ ಗಸ್ತು ತಿರುಗುವುದು ಎಂದು ಸಂಭಾಷಣೆ ವೇಳೆ ಒಬ್ಬರು ನಿರ್ಲಕ್ಷದಿಂದ ಮಾತನಾಡಿದ್ದಾರೆ ಎನ್ನಲಾಗಿದೆ.

 

  

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್! ಖಾತೆಗೆ ಯಾವಾಗ ಬರುತ್ತೆ ಹಣ? ಇಲ್ಲಿದೆ ವಿವರ
ಪ್ರೀತಿ ವಿರೋಧಿಸಿದ ತಂದೆಯನ್ನು ಗೆಳೆಯನ ಜೊತೆ ಸೇರಿ ಮಸಣಕ್ಕೆ ಅಟ್ಟಿದ ಪಾಪಿ ಮಗಳು