ಬಗ್ಗದ ಮಾಯಾವತಿ : ಸಚಿವರ ರಾಜೀನಾಮೆ ಅಂಗೀಕಾರ

Published : Oct 16, 2018, 11:22 AM IST
ಬಗ್ಗದ ಮಾಯಾವತಿ : ಸಚಿವರ ರಾಜೀನಾಮೆ ಅಂಗೀಕಾರ

ಸಾರಾಂಶ

ಸಂಧಾನಕ್ಕೆ ಮಣಿಯದ ಬಿಎಸ್ಪಿ ಅಧಿನಾಯಕಿ ಮಾಯವತಿ ಅವರು, ಪಕ್ಷದ ಸಚಿವರ ರಾಜೀನಾಮೆ ಅಂಗೀಕರಿಸುವಂತೆ ತಮ್ಮ ಸಂದೇಶವನ್ನು ದೂತ ಸತೀಶ್ ಮಿಶ್ರಾ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಲುಪಿಸಿದರು. ಎನ್. ಮಹೇಶ್ ಸಲ್ಲಿಸಿದ್ದ ರಾಜೀನಾಮೆ ಯನ್ನು ಸೋಮವಾರ ರಾಜ್ಯಪಾಲರು ಅಂಗೀಕರಿಸಿದ್ದಾರೆ. 

ಬೆಂಗಳೂರು: ನಾಲ್ಕು ದಿನಗಳ ಹಿಂದೆ ದಿಢೀರ್‌ನೇ ಸಚಿವ ಸ್ಥಾನಕ್ಕೆ ಬಿಎಸ್ಪಿ ಶಾಸಕ ಎನ್. ಮಹೇಶ್ ಸಲ್ಲಿಸಿದ್ದ ರಾಜೀನಾಮೆ ಯನ್ನು ಸೋಮವಾರ ರಾಜ್ಯಪಾಲರು ಅಂಗೀಕರಿಸಿದ್ದಾರೆ. 

ಮೈತ್ರಿ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ಬಿಎಸ್ಪಿಯ ಏಕೈಕ ಶಾಸಕ ಮಹೇಶ್ ಅವರು ಪಕ್ಷದ ಸಂಘಟನೆ ಮತ್ತು ಸ್ವಕ್ಷೇತ್ರದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವ ಕಾರಣ ನೀಡಿ ಮಂತ್ರಿ ಪದವಿ ತ್ಯಜಿಸಿದ್ದರು. ಬಳಿಕ ತೃತೀಯ ರಂಗದ ನಾಯಕರ ಮೂಲಕ ಬಿಎಸ್ಪಿ ಮುಖಂಡರ ಮನವೊಲಿಕೆಗೆ ಜೆಡಿಎಸ್ ಪಕ್ಷದಿಂದ ಯತ್ನವೂ ನಡೆಯಿತು. 

ಆದರೆ ಈ ಸಂಧಾನಕ್ಕೆ ಮಣಿಯದ ಬಿಎಸ್ಪಿ ಅಧಿನಾಯಕಿ ಮಾಯವತಿ ಅವರು, ಪಕ್ಷದ ಸಚಿವರ ರಾಜೀನಾಮೆ ಅಂಗೀಕರಿಸುವಂತೆ ತಮ್ಮ ಸಂದೇಶವನ್ನು ದೂತ ಸತೀಶ್ ಮಿಶ್ರಾ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಲುಪಿಸಿದರು. 

ಈ ಸಂದೇಶ ರವಾನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮಹೇಶ್ ಅವರ ರಾಜೀನಾಮೆ ಅಂಗೀಕರಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದರು. ಇದಕ್ಕೆ ಸಂಜೆ ಹೊತ್ತಿಗೆ  ರಾಜ್ಯಪಾಲರು ಸಮ್ಮತಿಸಿದರು. ಮಹೇಶ್ ರಾಜೀನಾಮೆ ಅಂಗೀಕಾರದಿಂದಾಗಿ ಸಂಪುಟದಲ್ಲಿ 8 ಸ್ಥಾನ ಖಾಲಿ ಉಳಿದಂತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮಲ್ಲಿಕಾರ್ಜುನ ಖರ್ಗೆ ಹಠಾವೋ ಪ್ರಿಯಾಂಕಾ ಗಾಂಧಿ ಲಾವೋ, ಕಾಂಗ್ರೆಸ್ ಅಧ್ಯಕ್ಷ ಬದಲಾವಣೆಗೆ ಹೋರಾಟ
ಅನಾರೋಗ್ಯ ಏನಿದ್ದರೂ ವೀಕ್ ಆಫ್‌ನಲ್ಲೇ ಬರಬೇಕು ಸಿಕ್ ಲೀವ್ ಇಲ್ಲ, ನೋವು ತೋಡಿಕೊಂಡ ಉದ್ಯೋಗಿ