
ಬೆಂಗಳೂರು: ಪೈರಸಿ ವಿರುದ್ಧ ಸಮರ ಸಾರಿರುವ ತಮಿಳು ಚಿತ್ರ ನಿರ್ಮಾಪಕರ ಸಂಘ ತಮಿಳುನಾಡಿನ ಮತ್ತು ಕರ್ನಾಟಕದ ಕೆಲವು ಚಿತ್ರಮಂದಿರಗಳಲ್ಲಿ ತಮಿಳು ಚಿತ್ರಗಳ ಪೈರಸಿ ಆಗಿದೆ ಎಂದು ಆರೋಪಿಸಿ ಒಟ್ಟು ಹತ್ತು ಚಿತ್ರಮಂದಿರಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಹತ್ತರಲ್ಲಿ ಎರಡು ಚಿತ್ರಮಂದಿರ ಕರ್ನಾಟಕಕ್ಕೆ ಸೇರಿವೆ.
ಅದರಲ್ಲಿ ಒಂದು ಬೆಂಗಳೂರಿನ ಜಿಟಿ ವರ್ಲ್ಡ್ ಮಾಲ್ ನಲ್ಲಿರುವ ಸತ್ಯಂ ಸಿನಿಮಾಸ್, ಇನ್ನೊಂದು ಮಂಗಳೂರಿನ ಸಿನಿಪೊಲೀಸ್. ಸತ್ಯಂ ಸಿನಿಮಾಸ್ ನಲ್ಲಿ ನಯನತಾರಾ, ಅನುರಾಗ್ ಕಶ್ಯಪ್ ಅಭಿನಯದ ಇಮೈಕಾ ನೊಡಿಗಲ್ ಮತ್ತು ಸಿನಿಪೊಲೀಸ್ನಲ್ಲಿ ಶಿವಕಾರ್ತಿಕೇಯನ್, ಸಮಂತಾ ನಟಿಸಿರುವ ಸೀಮ ರಾಜ ಚಿತ್ರಗಳ ಪೈರಸಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಅಲ್ಲದೇ ಅ.17 ಮತ್ತು ಅ. 18ರಂದು ಸಿನಿಮಾ ಬಿಡುಗಡೆಗೊಳಿಸುತ್ತಿರುವ ಚಿತ್ರಗಳ ನಿರ್ಮಾಪಕರು ಪಟ್ಟಿ ಮಾಡಿರುವ ಈ ಹತ್ತು ಥಿಯೇಟರ್ಗಳಲ್ಲಿ ತಮ್ಮ ಚಿತ್ರವನ್ನು ಡುಗಡೆಗೊಳಿಸಬಾರದು ಎಂದು ಕ್ಯೂಬ್ ಸಂಸ್ಥೆಗೆ ಮನವಿ ಸಲ್ಲಿಸಿದ್ದಾರೆ. ಈ ಕುರಿತು ವಿಶಾಲ್ ಅಧ್ಯಕ್ಷರಾಗಿರುವ ತಮಿಳು ಚಿತ್ರ ನಿರ್ಮಾಪಕರ ಸಂಘ ಪ್ರಕಟಣೆ ಹೊರಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ