ಸರ್ಕಾರಿ ಬಸ್ ಧಗಧಗ: ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ವೃದ್ಧೆ ಸಜೀವ ದಹನ

Published : Feb 21, 2017, 03:03 AM ISTUpdated : Apr 11, 2018, 12:59 PM IST
ಸರ್ಕಾರಿ ಬಸ್ ಧಗಧಗ: ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ವೃದ್ಧೆ ಸಜೀವ ದಹನ

ಸಾರಾಂಶ

ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ ಗೆ  ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ವೃದ್ಧೆ ಪ್ರಯಾಣಿಕರೊಬ್ಬರು ಸಜೀವ ದಹನವಾಗಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಬಳಿಯ ಅರಿಶೀನಕುಂಟೆ ಸಮೀಪ ಸಂಭವಿಸಿದೆ. ದಾಸರಹಳ್ಳಿ ಮೂಲದ ಭಾಗ್ಯಮ್ಮ ಮೃತ ದುರ್ಧೈವಿ.

ಬೆಂಗಳೂರು(ಫೆ.21): ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ ಗೆ  ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ವೃದ್ಧೆ ಪ್ರಯಾಣಿಕರೊಬ್ಬರು ಸಜೀವ ದಹನವಾಗಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಬಳಿಯ ಅರಿಶೀನಕುಂಟೆ ಸಮೀಪ ಸಂಭವಿಸಿದೆ. ದಾಸರಹಳ್ಳಿ ಮೂಲದ ಭಾಗ್ಯಮ್ಮ ಮೃತ ದುರ್ಧೈವಿ.

ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ KA 18F-640 ನಂಬರ್​​​ನ ಕೆಎಸ್​​ಆರ್​ಟಿಸಿ ಬಸ್​​ ರಾತ್ರಿ 12 ಗಂಟೆ ಸುಮಾರಿಗೆ ​​ಅರೀಶಿನಕುಂಟೆ ಬಳಿ ಬರುತ್ತಿದ್ದಾಗ ಇಂಜಿನ್​​ನಲ್ಲಿ ಬೆಂಕಿ ಕಾಣಿಸುತ್ತಿಕೊಂಡಿದೆ. ಕೂಡಲೇ ಚಾಲಕ ಬಸ್'ನ್ನು ನಿಲ್ಲಿಸಿದನಾದರೂ, ಎಲ್ಲಾ ಪ್ರಾಯಾಣಿಕರು ಬಸ್ ನಿಂದ ಇಳಿಯಲು ಸಾಧ್ಯವಾಗಲಿಲ್ಲ. ಪರಿಣಾಮ ಬಸ್​'ನಲ್ಲಿ ಪ್ರಯಾಣ ಮಾಡುತ್ತಿದ್ದ 50 ಜನರ ಪೈಕಿ ಭಾಗ್ಯಮ್ಮ ಎಂಬಾ ವೃದ್ಧೆ ಬಸ್'​​ನಲ್ಲಿ ಸಜೀವ ದಹನವಾಗಿದ್ದು, 9 ಮಂದಿಗೆ ಗಂಭೀರ ಸುಟ್ಟ ಗಾಯಗಳಾಗಿವೆ.

ಗಂಭೀರ ಗಾಯಗೊಂಡಿರುವ ಗಾಯಳುಗಳಿಗೆ ನೆಲಮಂಗಲದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ಕೊಡಿಸಲಾಗುತ್ತಿದ್ದೆ. ಈ ಸಂಬಂಧ ನೆಲಮಂಗಲ ಗ್ರಾಮಂತರ ಪೊಲೀಸ್​​ ಠಾಣೆಯಲ್ಲಿ ​ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌