
ಕಲಬುರ್ಗಿ(ಅ.27): ಗೋಳಾದ ಗ್ರಾಮ ದೇವತೆ ಲಕ್ಕಮ್ಮ, ಶಕ್ತಿ ದೇವತೆ ದೇವಿ ಬಳಿ ಬೇಡಿಕೊಂಡಿದ್ದೆಲ್ಲಾ ಈಡೇರುತ್ತಂತೆ ಹೀಗಾಗಿ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ದೇವಿ ಬಳಿ ಚಪ್ಪಲಿ ಕಟ್ಟೋ ಹರಕೆ ಹೊತ್ತಿರ್ತಾರೆ. ಇಷ್ಟಾರ್ಥ ಸಿದ್ಧಿಯಾದ ಬಳಿಕ ದೀಪಾವಳಿ ಕಡೆಯ ಪಂಚಮಿಯಂದು ನಡೆಯುವ ಜಾತ್ರೆಗೆ ಬಂದು ಚಪ್ಪಲಿ ಕಟ್ಟಿ ಹರಕೆ ತೀರಿಸುತ್ತಾರೆ.
ಜಗವೆಲ್ಲ ಸಂಚರಿಸೋ ದೇವಿ ಪಾದಕ್ಕೆ ಯಾವುದೇ ನೋವು ಬಾರದಿರಲಿ ಅನ್ನೋದೇ ಈ ಆಚರಣೆ ಹಿಂದಿನ ನಂಬಿಕೆಯಂತೆ. ಇನ್ನೂ ಎಲ್ಲಾ ದೇವರಿಗೆ ಎದುರಿನಿಂದ ಪೂಜೆ ಸಲ್ಲಿಸಿದರೆ, ಲಕ್ಕಮ್ಮ ದೇವಿಗೆ ಹಿಂಭಾಗದಿಂದ ಪೂಜೆ ಸಲ್ಲಿಸುವುದು ಇನ್ನೊಂದು ವಿಶೇಷ..
ಸೂರ್ಯೋದಯದಿಂದ ಸೂರ್ಯಾಸ್ತಕ್ಕೂ ಮುನ್ನವೇ ಜಾತ್ರೆ ಮುಗಿಯಬೇಕು ಅನ್ನೋದು ಇನ್ನೊಂದು ವಿಶೇಷ. ಒಟ್ಟಾರೆ ಹಲವು ವಿಶೇಷತೆಗಳ ಗೋಳಾ ಲಕ್ಕಮ್ಮ ಚಪ್ಪಲಿ ಜಾತ್ರೆ ನಿನ್ನೆಅದ್ದೂರಿಯಾಗಿ ನಡೆಯಿತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.