
ನವದೆಹಲಿ (ಮಾ.17): ರಾಜ್ಯಸಭೆಯಲ್ಲಿಂದು ಗೋವಾ ಸರ್ಕಾರ ರಚನೆ ವಿಚಾರ ಪ್ರತಿಧ್ವನಿಸಿದೆ.
ಕಲಾಪಗಳು ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಈ ಗೋವಾದಲ್ಲಿ ಬಿಜ ಸರ್ಕಾರ ರಚಿಸಿರುವ ಕ್ರಮವನ್ನು ಪ್ರಸ್ತಾಪಿಸಿದ್ದಾರೆ.
ಅದರ ಬೆನ್ನಲ್ಲೇ ಪ್ರತಿಪಕ್ಷದ ಸದಸ್ಯರು ‘ನಿಲ್ಲಿಸಿ, ನಿಲ್ಲಿಸಿ, ಪ್ರಜಾತತಂತ್ರದ ಕಗ್ಗೊಲೆಯನ್ನು ನಿಲ್ಲಿಸಿ’ ಎಂಬ ಘೋಷಣೆಗಳನ್ನು ಕೂಗಲಾರಂಭಿಸಿದ್ದಾರೆ.
ಗೋವಾ ರಾಜ್ಯಪಾಲರ ಕ್ರಮವನ್ನು ಗೊತ್ತುವಳಿಯ ಮೂಲಕ ಮಾತ್ರ ಚರ್ಚಿಸಬಹುದು ಎಂದು ಉಪಸಭಾಪತಿ ಪಿ.ಜೆ.ಕುರಿಯನ್ ಹೇಳಿದ್ದಾರೆ.
ಮಧ್ಯಪ್ರವೇಶಿಸಿದ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, ಗೋವಾ ವಿಚಾರವನ್ನು ಚರಚಿಸಲು ಸರ್ಕಾರ ಸಿದ್ಧವಿದೆ, ಪ್ರತಿಪಕ್ಷಗಳು ಅದಕ್ಕೆ ಸಂಬಂಧಿಸಿದ ಗೊತ್ತುವಳಿಯನ್ನು ಮಂಡಿಸಲಿ ಎಂದು ದಿಗ್ವಿಜಯ್ ಸಿಂಗ್’ಗೆ ಪ್ರತ್ಯುತ್ತರ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.