
ಚೆನ್ನೈ [ಆ.09]: ‘ಕನಿಷ್ಠ 100 ರು. ದೇಣಿಗೆ ನೀಡಿ, ವೈಕೋ ಜೊತೆ ಸೆಲ್ಫಿ ಪಡೆಯಿರಿ’! ಇದೇನಿದು ಸೆಲ್ಫಿಗೆ 100 ರು. ಕೊಡಬೇಕಾ ಎಂದು ಹುಬ್ಬೇರಿಸಬೇಡಿ.
ಆರ್ಥಿಕವಾಗಿ ಸಂಕಷ್ಟಎದುರಿಸುತ್ತಿರುವ ತಮಿಳುನಾಡಿನ ಪ್ರಾದೇಶಿಕ ಪಕ್ಷ ಎಂಡಿಎಂಕೆ ನಿಧಿ ಸಂಗ್ರಹಕ್ಕಾಗಿ ಅನುಸರಿಸುತ್ತಿರುವ ಅಭಿಯಾನ.
ಕಾಶ್ಮೀರ ವಿಚಾರವಾಗಿ ರಾಜ್ಯಸಭೆಯಲ್ಲಿ ಮಾಡಿದ ಭಾಷಣದ ಬಳಿಕ ಮತ್ತಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಎಂಡಿಎಂಕೆ ಸಂಸ್ಥಾಪಕ ವೈಕೋ ಅವರನ್ನೇ ಬ್ರಾಂಡ್ ಮಾಡಿಕೊಂಡು ಪಕ್ಷದ ಸಂಘಟನೆಗೆ ನಿಧಿ ಸಂಗ್ರಹಿಸುತ್ತಿದೆ.
ಸಂಸದ ವೈಕೋ ಅವರು ಎಂಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಶಾಲುಗಳಿಗೆ ಹಣ ಹಾಕಿ ದುಂದುವೆಚ್ಚ ಮಾಡುವ ಬದಲು ಪಕ್ಷಕ್ಕೆ ದೇಣಿಗೆ ನೀಡಿ ಎಂಬ ಘೋಷಣೆಯೊಂದಿಗೆ ಅಭಿಯಾನ ಕೈಗೊಂಡಿದೆ. ಈಗಾಗಲೇ ಪಕ್ಷದ ಕಾರ್ಯಕರ್ತರಿಗೆ ಸೂಚನೆಯನ್ನೂ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.