ಅದೆಲ್ಲಿಗೆ ಕರಿತಿಯೋ ಕರಿ ಬರ್ತಿನಿ: ರೆಡ್ಡಿ ಚಾಲೆಂಜ್ ಸ್ವೀಕರಿಸಿದ ಸಿದ್ದು

Published : Oct 29, 2018, 07:35 PM ISTUpdated : Oct 29, 2018, 07:37 PM IST
ಅದೆಲ್ಲಿಗೆ ಕರಿತಿಯೋ ಕರಿ ಬರ್ತಿನಿ: ರೆಡ್ಡಿ ಚಾಲೆಂಜ್ ಸ್ವೀಕರಿಸಿದ ಸಿದ್ದು

ಸಾರಾಂಶ

ಜನಾರ್ದನ ರೆಡ್ಡಿ ಹಾಕಿದ ಸವಾಲನ್ನು ಮಾಜಿ ಸಿಎಂ ಸಿದ್ದರಾಮಯ್ಯ ಸ್ವೀಕರಿಸಿದ್ದಾರೆ. ರೆಡ್ಡಿ ಪಂಥಾಹ್ವಾನಕ್ಕೆ ಸಿದ್ದು ಏನು ಹೇಳಿದ್ದಾರೆ ನೋಡಿ.

ಬಳ್ಳಾರಿ (ಅ.29):  ನೀನಂತೂ ಬಳ್ಳಾರಿ, ಬೆಂಗಳೂರಿಗೆ ಬರುವ ಆಗಿಲ್ಲ. ಅದೆಲ್ಲಿ ಕರಿತಿಯೋ ಕರಿ ಅಲ್ಲಿಯೇ ಬಂದು ಬಹಿರಂಗ ಚರ್ಚೆ ಮಾಡುತ್ತೇನೆ ಎಂದು ಜನಾರ್ದನ ರೆಡ್ಡಿ ಸವಾಲನ್ನು  ಸಿದ್ದರಾಮಯ್ಯ ಸ್ವೀಕರಿಸಿದ್ದಾರೆ.

ಇಂದು [ಸೋಮವಾರ] ಬಳ್ಳಾರಿಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ,  ನಾನು ಅಕ್ರಮ ಗಣಿಗಾರಿಕೆ ಮಾಡಿಲ್ಲ. ನನ್ನ ಅಧಿಕಾರ ಅವಧಿಯಲ್ಲಿ ಜಿಲ್ಲೆ ಅಭಿವೃದ್ಧಿ ಕಂಡಿದೆ. ಈ ಕುರಿತು ಅಂಕಿ ಅಂಶ ಸಹಿತ ಚರ್ಚೆಗೆ ನಾನು ಸಿದ್ದ ಎಂದು ಬಹಿರಂಗ ಪಡಿಸಿಸದರು.

 ಜನಾರ್ದನ ರೆಡ್ಡಿ ಅವರು ಮೊಳಕಾಲ್ಮೂರಿನಲ್ಲಿ ಪ್ರತಿಕಾಗೋಷ್ಠಿ ನಡೆಸಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯಗೆ ಪಂಥಾಹ್ವಾನ ನೀಡಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಅಕ್ರಮ ಗಣಿಗಾರಿಕೆ ಮಾಡಿಲ್ಲ ಎಂದರೆ ಕೋಟಿ, ಕೋಟಿ ಹಣ ಎಲ್ಲಿಂದ ಬಂತು. ಮನೆಯಲ್ಲಿ ಚಿನ್ನದ ಚೇರು, ಚಿನ್ನದ ಕಮೋಡು  ಹೇಗೆ ಬಂತು. ಇವು ನಿಮ್ಮ ಪೂರ್ವರ್ಜಿತ ಆಸ್ತಿಯೇ ಎಂದು ಪ್ರಶ್ನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇಳಿದ್ದೆಲ್ಲವನ್ನೂ ಕೊಡ್ತಿದ್ದ 57ರ ಸರ್ಕಾರಿ ಶಾಲಾ ಶಿಕ್ಷಕಿಯ 27ರ ಹರೆಯದ ಪ್ರೇಮಿ: ಏಕಾಏಕಿ ಸುಟ್ಟು ಹಾಕಿದ್ದೇಕೆ?
ಕರ್ನಾಟಕದ 2 ಕ್ಷೇತ್ರ, ಮೂರು ರಾಜ್ಯಗಳಲ್ಲಿ ನಾಳೆ ಮತದಾನ, ಉದ್ಯೋಗಿಗಳಿಗೆ ವೇತನ ಸಹಿತ ರಜೆ