
ಮುಂಬೈ/ಬೆಂಗಳೂರು: ಕೇರಳದಲ್ಲಿ ಸಂಭವಿಸಿದ ಭೀಕರ ಮಳೆ, ಪ್ರವಾಹದ ಹಿನ್ನೆಲೆಯಲ್ಲಿ ದೇಶಾದ್ಯಂತ ಚಿನ್ನದ ಬೇಡಿಕೆ ಕುಸಿತಕಂಡಿದೆ. ಸಾಮಾನ್ಯವಾಗಿ ಓಣಂ ಹಬ್ಬದ ಸಂದರ್ಭ ಕೇರಳದಲ್ಲಿ ಚಿನ್ನದ ಖರೀದಿ ಹೆಚ್ಚಾಗುವುದರಿಂದ, ದೇಶದಲ್ಲಿ ಈ ಅವಧಿಯಲ್ಲಿ ಚಿನ್ನದ ಬೆಲೆಯೂ ಹೆಚ್ಚಿರುತಿತ್ತು. ಆದರೆ, ಈ ಬಾರಿ ಪ್ರವಾಹದಿಂದ ತತ್ತರಿಸಿರುವ ಕೇರಳದಲ್ಲಿ ಓಣಂ ಆಚರಣೆಗೆ ಮಂಕು ಕವಿದಿದ್ದು, ಚಿನ್ನದ ಖರೀದಿಗೂ ಜನ ಆಸಕ್ತಿ ತೋರಿಲ್ಲ. ಹೀಗಾಗಿ ಚಿನ್ನಕ್ಕೆ ಬೇಡಿಕೆ ಕುಸಿದಿದೆ.
ಹೀಗಾಗಿ ಬೇಡಿಕೆ ಬಾರಿ ಕುಸಿದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಶುಕ್ರವಾರ 10 ಗ್ರಾಂ ಚಿನ್ನದ ಬೆಲೆ 29,635ಕ್ಕೆ ಇಳಿಕೆಯಾಗಿದ್ದು, ಕಳೆದ ವಾರ ಇದು 29,268ಕ್ಕೆ ಇಳಿಕೆಯಾಗಿತ್ತು. ಇದು ಜನವರಿ 10ರ ಬಳಿಕದ ಅತ್ಯಂತ ಕಡಿಮೆ ಬೆಲೆ.
ನೀರಸ ಓಣಂ: ಕೇರಳಿಗರ ಅತಿದೊಡ್ಡ ಹಬ್ಬ ಓಣಂ ಸಂಭ್ರಮಾಚರಣೆಯ ಮೇಲೆ ಇದೀಗ ಪ್ರವಾಹ ಸಂಕಷ್ಟದ ಕರಿ ಛಾಯೆ ಮೂಡಿದೆ. ಪ್ರತಿ ವರ್ಷ ಅದ್ದೂರಿಯಾಗಿ ಆಚರಿಸಲ್ಪಡುವ ಹಬ್ಬ ಶನಿವಾರ ನಡೆಯಲಿದ್ದು, ಆಚರಣೆಯ ಉತ್ಸುಕತೆ ಜನರಲ್ಲಿ ಕಂಡುಬರುತ್ತಿಲ್ಲ. ಹೂವು, ಹಣ್ಣು, ದೀಪಗಳ ಖರೀದಿಯ ಭರಾಟೆ ಎಲ್ಲೂ ಕಾಣುತ್ತಿಲ್ಲ. ಕೆಲವರು ಅಬ್ಬರದ ಓಣಂ ಆಚರಣೆಯ ಬದಲು ಅದರ ಹಣವನ್ನು ಸಂತ್ರಸ್ತರ ನಿಧಿಗೆ ನೀಡಲು ಮುಂದಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.