ಮುನಿಸಿಕೊಂಡ ನಿಸರ್ಗ, ಭಾರತದಲ್ಲಿ ಭೂಕಂಪ

By Web DeskFirst Published Aug 25, 2018, 11:04 AM IST
Highlights

ಮಾನವನ ಮೇಲೆ ಮುನಿಸಿಕೊಂಡಿರುವ ನಿಸರ್ಗ ಸದ್ಯಕ್ಕೆ ಸುಮ್ಮನಾಗುವಂತೆ ಕಾಣುತ್ತಿಲ್ಲ. ಪ್ರಹಾಹದಿಂದ ಇಡೀ ಕೇರಳವನ್ನೇ ಬಲಿ ಪಡೆದಿದ್ದ ಪ್ರಕೃತಿಯಲ್ಲಿ ಇದೀಗ ಭೂಕಂಪನವೂ ಆಗಿದೆ.

ಅಂಡಮಾನ್[ಆ.25]  ಅಂಡಮಾನ್ ನಿಕೋಬಾರ್ ದ್ವೀಪ ಪ್ರದೇಶದಲ್ಲಿ ಭೂಕಂಪನವಾಗಿದ್ದು ರಿಕ್ಟರ್ ಮಾಪನದಲ್ಲಿ 5.5  ತೀವ್ರತೆ ದಾಖಲಾಗಿದೆ. ಯುನೖಟೆಡ್ ಸ್ಟೇಟ್ಸ್ ಭೂಗರ್ಭ ವಿಭಾಗ ಹೇಳುವಂತೆ ಪೋರ್ಟ್ ಬ್ಲೇರ್ ನಿಂದ 150 ಕಿಮೀ ದೂರದಲ್ಲಿ ಭೂಕಂಪನದ ಕೇಂದ್ರ ಕಂಡುಬಂದಿದೆ. 

ಶುಕ್ರವಾರ ಮಧ್ಯಾಹ್ನ 4.19 ರ ವೇಳೆ  27 ಸೆಕೆಂಡ್ ಕಾಲ ಭೂಕಂಪ ಆಗಿದೆ.  ಭೂಮಿಯ 10 ಕಿಮೀ ಆಳದದಲ್ಲಿ ಭೂಕಂಪನ ಆಗಿದ್ದು ಹಿಂದೆ ಜುಲೈ5 ಮತ್ತು 4 ರಂದು ಸಣ್ಣ ಪ್ರಮಾಣದಲ್ಲಿ ಭೂಮಿ ನಡುಗಿದ್ದ ವಿವರಗಳು ಲಭ್ಯವಾಗಿವೆ.

ಕೊಡಗು ಪ್ರವಾಹಕ್ಕೆ ಭೂಕಂಪನ ಕಾರಣವೆ?

ಒಂದು ಕಡೆ ಕೇರಳದಲ್ಲಿ ಜಲಪ್ರಳಯವಾಗಿದ್ದು ಜನರು ಮತ್ತೆ ಜೀವನ ಕಟ್ಟಿಕೊಳ್ಳಲು ಹೆಣಗುತ್ತಿದ್ದಾರೆ. ಕರ್ನಾಟಕದ ಕೊಡಗಿನಲ್ಲೂ ಜನರು ಸಂಕಷ್ಟಕ್ಕೆ ಸಿಲುಕಿದ್ದು ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ನಡೆಯುತ್ತಿದೆ.

click me!