
ಬೆಂಗಳೂರು(ಏ.16): ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ‘ಹರ ಹರ ಮಹಾದೇವ' ಧಾರಾವಾಹಿ ಚಿತ್ರೀಕರಣಕ್ಕೆ ಹಾಕಿರುವ ಸೆಟ್ಗೆ ವಿದ್ಯುತ್ ಅವಘಡದಿಂದ ಬೆಂಕಿ ತಗುಲಿ ಸುಮಾರು 1 ಕೋಟಿ ರು. ಅಧಿಕ ಮೊತ್ತದ ಚಿತ್ರೀಕರಣದ ವಸ್ತುಗಳು ಭಸ್ಮವಾಗಿರುವ ಘಟನೆ ಮುಂಬೈನ ಹೊರವಲಯ ದಲ್ಲಿ ನಡೆದಿದೆ. ಅಲ್ಲದೇ ವಿದ್ಯುತ್ ಅವಘಡದಿಂದ ಹರ ಹರ ಮಹಾದೇವ್ ಸೇರಿದಂತೆ ಸ್ಟಾರ್ ಪ್ಲಸ್ನ ಹಿಂದಿ ಧಾರಾವಾಹಿಯ ಚಿತ್ರೀಕರಣಕ್ಕೆ ಅಡಚಣೆಯಾ ಗಿದೆ ಎಂದು ಮೂಲಗಳು ತಿಳಿಸಿವೆ. ಶನಿವಾರ ಬೆಳಗ್ಗೆ 11ರ ಸುಮಾರಿಗೆ ಅಗ್ನಿ ಅನಾಹುತ ಸಂಭವಿಸಿದ್ದು, ಪ್ರಾಣಾಪಾಯವಾಗಿಲ್ಲ. ನಿಖಿಲ್ ಸಿನ್ಹಾ ನಿರ್ದೇಶನದ ಹರ ಹರ ಮಹಾದೇವ ಧಾರಾವಾಹಿ ಕನ್ನಡದ ಮಟ್ಟಿಗೆ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಪೌರಾಣಿಕ ಹಿನ್ನೆಲೆಯ ಈ ಕತೆಯಲ್ಲಿ ಮೂಲ ಕತೆಯ ಚಿತ್ರೀಕರಣ ನಡೆದಿದ್ದು ಮುಂಬೈನ ಅದ್ಧೂರಿ ಸೆಟ್ಅನ್ನು ಬಳಸಿಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.