
ನವದೆಹಲಿ[ಜು.19] ಎಐಸಿಸಿ ಸೋಶಿಯಲ್ ಮೀಡಿಯಾದ ಮುಖ್ಯಸ್ಥೆ ಸ್ಥಾನ ದಿವ್ಯಸ್ಪಂದನಾ ಅಲಿಯಾಸ್ ರಮ್ಯಾ ಅವರಿಗೆ ಗೇಟ್ ಪಾಸ್ ನೀಡಲಾಗುತ್ತಿದೆಯೇ? ಹೌದು ಗುರುವಾರದ ಸೋಶಿಯಲ್ ಮೀಡಿಯಾ ನೋಡಿದರೆ ನಿಮಗೆ ಇಂಥದ್ದೊಂದು ಅನುಮಾನ ಬಂದಿರುತ್ತದೆ.
ಸ್ವರಾ ಭಾಸ್ಕರ್ ಮಾಡಿದ್ದರು ಎನ್ನಲಾದ ಟ್ವೀಟ್ ಈ ಎಲ್ಲ ಘಟನೆಗಳಿಗೆ ಮೂಲ ಕಾಣ. ಟಿವಿ ಸ್ಟುಡಿಯೋವೊಂದರಲ್ಲಿ ಮೌಲಾನಾವೊಬ್ಬರು ಟಿವಿಯ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ್ದು ಸುದ್ದಿಯಾಗಿತ್ತು. ಇದಾದ ಮೇಲೆ ಸ್ವರಾ ಭಾಸ್ಕರ್ ಬಿಜೆಪಿ ಮತ್ತು ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದರು.
ಸ್ವರಾ ದೃಶ್ಯದ ಬಳಿಕ ಲೈಂಗಿಕ ಸಾಧನಗಳ ಖರೀದಿ ಭರ್ಜರಿ ಜಂಪ್
ಮುಸಲ್ಮಾನರು ನಮ್ಮಂತೆ ಮನುಷ್ಯರು, ನಾನು ಅವರೊಂದಿಗೆ ಮುಕ್ತವಾಗಿ ಮಾತನಾಡುತ್ತೇನೆ ಎಂದು ಕೆಲ ಬಾಲಿವುಡ್ ಸ್ಟಾರ್ ಗಳೊಂದಿಗೆ ಸೇರಿ ಟ್ವಿಟರ್ ನಲ್ಲಿ ಭಿತ್ತಿಪತ್ರದ ಅಭಿಯಾನ ಮಾಡಿದ್ದರು.,
ಇದೆಲ್ಲವನ್ನು ಕೂತಲ್ಲೇ ವೀಕ್ಷಣೆ ಮಾಡುತ್ತಿದ್ದ ಜಾಲತಾಣಿಗರು ಸ್ವರಾ ಭಾಸ್ಕರ್ ಸಾಮಾಜಿಕ ತಾಣದಲ್ಲಿ ರಮ್ಯಾ ಅವರನ್ನೇ ಹಿಂದಿಕ್ಕಿದ್ದು ಎಐಸಿಸಿ ಸೋಶಿಯಲ್ ಮೀಡಿಯಾ ಜವಾಬ್ದಾರಿ ಹೊರಲು ಸ್ವರಾ ಭಾಸ್ಕರ್ ಸೂಕ್ತ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.