
ಹಾಸನ(ಸೆ.25): ಬೆಳೆಗಳು ಒಣಗುತ್ತಿರುವ ತಮ್ಮ ಜಮೀನುಗಳಿಗೆ ನೀರು ಬಿಡದ ಸಚಿವರು ಹಾಗೂ ಶಾಸಕರನ್ನು ಅಪಹರಣ ಮಾಡಲು 100 ಕ್ಕೂ ಹೆಚ್ಚು ರೈತರ ತಂಡ ಹೊಂಚು ಹಾಕಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಏನಿದು ಅಪಹರಣ ಸಂಚು
ನಾಲೆಗಳಲ್ಲಿ ನೀರಿಲ್ಲ ಬೆಳೆಗಳು ಒಣಗಿವೆ ಎಂಬ ಕಾರಣಕ್ಕೆ ಆಕ್ರೋಶಗೊಂಡಿದ್ದ ರೈತರು ಕಾವೇರಿ ಕಣಿವೆಯ ಪ್ರದೇಶಗಳಿಗೆ ಅಧ್ಯಯನ ಪ್ರವಾಸಕ್ಕೆ ಹೋಗಿರುವ ಪತ್ರಕರ್ತರ ಜತೆ ಸಚಿವರು, ಶಾಸಕರು ಬಂದಿದ್ದರೆ ಅವರಿಗೆ ಅಡ್ಡಿಪಡಿಸಿ ಬಲವಂತವಾಗಿ ತಮ್ಮ ಹಳ್ಳಿಗಳಿಗೆ ಕರೆದುಕೊಂಡು ಒಣಗುತ್ತಿರುವ ತಮ್ಮ ಜಮೀನನ್ನು ತೋರಿಸಿ ಕಷ್ಟವನ್ನು ಹೇಳಿ ನೀರು ಬಿಡಿಸಿಕೊಳ್ಳಲು ಗುಬ್ಬಿ ತಾಲೂಕಿನ ಕಿಟ್ಟದ ಕುಪ್ಪೆ ಬಳಿ 100ಕ್ಕೂ ಹೆಚ್ಚು ರೈತರ ತಂಡ ಸಜ್ಜಾಗಿದ್ದರು.
ಅಪಹರಿಸಲು ಸಲುವಾಗಿಯೇ ರೈತರು 2 ಕಾರುಗಳನ್ನು ರೆಡಿ ಮಾಡಿಕೊಂಡಿದ್ದರು. ತುಮಕೂರು ಜಿಲ್ಲೆಯಿಂದ ಹಾಸನ ಜಿಲ್ಲೆಗೆ ಬಂದ ಕೂಡಲೆ ಬಸ್ಸುಗಳನ್ನು ತಡೆ ಹಿಡಿದು ಜನಪ್ರತಿನಿಧಿಗಳನ್ನು ಸಮೀಪದ ಹಳ್ಳಿಗೆ ಕರೆದೊಯ್ಯಲು ತಂಡ ನಿರ್ಧರಿಸಿತ್ತು. ಆದರೆ ಅಧ್ಯಯನ ಪ್ರವಾಸಕ್ಕೆ ಪತ್ರಕರ್ತರು ಮಾತ್ರ ಬರುತ್ತಿದ್ದಾರೆ ಎಂಬ ಮಾಹಿತಿ ಖಚಿತಗೊಂಡ ಮೇಲೆ ಈ ಯೋಜನೆಯನ್ನು ರೈತರು ಕೈಬಿಟ್ಟದ್ದಾರೆ. ಅಂತು ಸಚಿವರುಗಳು ಕಿಡ್ಯ್ನಾಪ್ ಆಗದೆ ದೊಡ್ಡ ಸುದ್ದಿಯಾಗುವುದನ್ನು ತಪ್ಪಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.