’ಮಂಡ್ಯದ ಗಂಡು’ ಅಂಬಿಗೆ ಮುದ್ದೆ- ಕೋಳಿ ಸಾರು ತಂದ ಅಭಿಮಾನಿ!

Published : Nov 26, 2018, 08:27 AM ISTUpdated : Nov 26, 2018, 08:29 AM IST
’ಮಂಡ್ಯದ ಗಂಡು’ ಅಂಬಿಗೆ ಮುದ್ದೆ- ಕೋಳಿ ಸಾರು ತಂದ ಅಭಿಮಾನಿ!

ಸಾರಾಂಶ

ಅಂಬರೀಶ್ ಅವರ ಅಂತಿಮ ದರ್ಶನಕ್ಕೆ ಮಂಡ್ಯದಿಂದ ಆಗಮಿಸಿದ್ಧ ಅಭಿಮಾನಿಯೊಬ್ಬ ಅಂಬಿಗೆ ಎರಡು ರಾಗಿ ಮುದ್ದೆ ಹಾಗೂ ನಾಟಿ ಕೋಳಿ ಸಾರು ತೆಗೆದುಕೊಂಡು ಬಂದಿದ್ದ! 

ಬೆಂಗಳೂರು[ನ.26]: ರೆಬೆಲ್‌ ಸ್ಟಾರ್‌ ಅಂಬರೀಷ್‌ ಅವರ ಅಂತಿಮ ದರ್ಶನಕ್ಕೆ ಮಂಡ್ಯದಿಂದ ಆಗಮಿಸಿದ್ಧ ಅಭಿಮಾನಿಯೊಬ್ಬ ಅಂಬಿಗೆ ಎರಡು ರಾಗಿ ಮುದ್ದೆ ಹಾಗೂ ನಾಟಿ ಕೋಳಿ ಸಾರು ತೆಗೆದುಕೊಂಡು ಬಂದಿದ್ದ!

ಇದನ್ನೂ ಓದಿ: ಮಾಲೀಕನಿಲ್ಲದೆ ಕಣ್ಣೀರಿಡುತ್ತಿದೆ ಅಂಬಿಯ ಸಾಕುನಾಯಿ 'ಕನ್ವರ್'!

ಶನಿವಾರ ರಾತ್ರಿ ನಿಧನರಾದ ಅಂಬರೀಷ್‌ ಅವರ ಅಂತಿಮ ದರ್ಶನಕ್ಕೆ ಭಾನುವಾರ ಕಂಠೀರವ ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅಂಬರೀಶ್‌ಗೆ ಚಿಕನ್‌ ಹಾಗೂ ನಾಟಿ ಕೋಳಿ ಸಾರು ತುಂಬಾ ಇಷ್ಟ ಎಂಬ ಕಾರ​ಣಕ್ಕೆ ಅಂತಿಮ ದರ್ಶನಕ್ಕೆ ನಾಟಿ ಕೋಳಿ ಸಾರು ಮತ್ತು ಮುದ್ದೆ ಸಮೇತ ಆಗಮಿಸಿದ್ದ. ದರ್ಶನ ಪಡೆದು ಪಾರ್ಥಿವ ಶರೀರದ ಬಳಿ ಮುದ್ದೆ ಮತ್ತು ನಾಟಿ ಕೋಳಿ ಸಾರು ಇಡುವುದಕ್ಕೆ ಮುಂದಾದ. ಆದರೆ, ಪೊಲೀಸರು ಅವಕಾಶ ನೀಡಲಿಲ್ಲ.

ಇದನ್ನೂ ಓದಿ: ನೋ ವೇ... ಚಾನ್ಸೇ ಇಲ್ಲ... ಅಂಬರೀಶ್ ಹೋಗಿಯೇ ಇಲ್ಲ!

ಬೇಸರಗೊಂಡ ಅಭಿಮಾನಿ ಪ್ರೀತಿಯಿಂದ ತೆಗೆದುಕೊಂಡು ಬಂದಿದ್ದ ಮುದ್ದೆ ಮತ್ತು ಕೋಳಿ ಸಾರನ್ನು ವಾಪಸ್‌ ತೆಗೆದುಕೊಂಡು ಹೋಗಬೇಕಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಂಡ ಹಾಕಿ ಲೈಂಗಿಕ ದೌರ್ಜನ್ಯ ಕೇಸ್ ಮುಚ್ಚಿ ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು! ಏನಿದು ಪ್ರಕರಣ?
ಗ್ರೇಟರ್ ಬೆಂಗಳೂರು: ವೈದ್ಯಕೀಯ ಪರಿಹಾರ ನಿಧಿ ಹಣಕ್ಕೆ ತಡೆ, ಬಡರೋಗಿಗಳ ನೆರವಿಗೆ ಕತ್ತರಿ?