Fact Check : ಚೀನಾದೊಳಗೆ ನುಗ್ಗಿ ಪಹರೆ ನಡೆಸಿದ್ರಾ ಭಾರತೀಯ ಸೈನಿಕರು?

Published : Sep 28, 2019, 11:31 AM IST
Fact Check : ಚೀನಾದೊಳಗೆ ನುಗ್ಗಿ ಪಹರೆ ನಡೆಸಿದ್ರಾ ಭಾರತೀಯ ಸೈನಿಕರು?

ಸಾರಾಂಶ

ಲೇಹ್‌-ಲಡಾಖ್‌ ವಲಯದಲ್ಲಿ ಚೀನಾದ ವಶದಲ್ಲಿರುವ ಪಾಂಗೊಂಗ್‌ ಸರೋವರದ ದಡದಲ್ಲಿ ಭಾರತೀಯ ಸೈನಿಕರು ಮುಕ್ತವಾಗಿ ಪಹರೆ ನಡೆಸಿದ್ದಾರೆ. ಚೀನಾದ ಸೇನಾಪಡೆ ಈ ಬಗ್ಗೆ ಆಕ್ಷೇಪ ತೆಗೆದರೂ ಭಾರತದ ಯೋಧರು ಕ್ಯಾರೇ ಎಂದಿಲ್ಲ. ಎಚ್ಚರ, ಚೀನಾ ಯೋಧರು ಈ ಅತಿಕ್ರಮಣಕಾರರಿಗೆ ಟೀ ನೀಡಲಿಲ್ಲ! ಹೀಗೊಂದು ಸಂದೇಶ ಟ್ವೀಟರ್‌ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

ಲೇಹ್‌-ಲಡಾಖ್‌ ವಲಯದಲ್ಲಿ ಚೀನಾದ ವಶದಲ್ಲಿರುವ ಪಾಂಗೊಂಗ್‌ ಸರೋವರದ ದಡದಲ್ಲಿ ಭಾರತೀಯ ಸೈನಿಕರು ಮುಕ್ತವಾಗಿ ಪಹರೆ ನಡೆಸಿದ್ದಾರೆ. ಚೀನಾದ ಸೇನಾಪಡೆ ಈ ಬಗ್ಗೆ ಆಕ್ಷೇಪ ತೆಗೆದರೂ ಭಾರತದ ಯೋಧರು ಕ್ಯಾರೇ ಎಂದಿಲ್ಲ. ಎಚ್ಚರ, ಚೀನಾ ಯೋಧರು ಈ ಅತಿಕ್ರಮಣಕಾರರಿಗೆ ಟೀ ನೀಡಲಿಲ್ಲ! ಹೀಗೊಂದು ಸಂದೇಶ ಟ್ವೀಟರ್‌ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಪಾಕಿಸ್ತಾನದಲ್ಲಿ ಭಾರತದ ವಾಯುಪಡೆಯ ಯೋಧ ಅಭಿನಂದನ್‌ ವರ್ತಮಾನ್‌ಗೆ ಟೀ ನೀಡಿದ್ದನ್ನು ಸ್ಮರಿಸಿ, ತಮ್ಮ ದೇಶದೊಳಗೆ ನುಗ್ಗಿದ ಭಾರತದ ಯೋಧರಿಗೆ ಚೀನಿ ಯೋಧರು ಟೀ ನೀಡಲಿಲ್ಲ ಎಂದು ಈ ಟ್ವೀಟ್‌ ಮಾಡಿದ ಇವಾ ಝೆಂಗ್‌ ಎಂಬಾಕೆ ಬರೆದಿದ್ದಾಳೆ.

Fact chek ಮೋದಿ ಕಾಲದಲ್ಲಿ ದೇಶದಲ್ಲಿ ಒಂದೂ ವಿಶ್ವದರ್ಜೆ ವಿವಿ ಇಲ್ಲ!

ಇದಕ್ಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚೀನಾದ ವಶದಲ್ಲಿರುವ ಭಾರತದ ಭೂಮಿಯನ್ನು ಭಾರತೀಯ ಯೋಧರು ಯಶಸ್ವಿಯಾಗಿ ಮರಳಿ ಪಡೆದಿದ್ದಾರೆ, ಇದು ಮೋದಿಯವರ ತಾಕತ್ತು ಎಂದೆಲ್ಲ ಕಮೆಂಟ್‌ಗಳು ಬಂದಿವೆ.

ನಿಜವಾಗಿಯೂ ಭಾರತದ ಯೋಧರು ಚೀನಾ ವಶದಲ್ಲಿರುವ ಪಾಂಗೊಂಗ್‌ ಸರೋವರದ ಪ್ರದೇಶಕ್ಕೆ ನುಗ್ಗಿ ಪಹರೆ ನಡೆಸಿದ್ದಾರೆಯೇ ಎಂದು ಟೈಮ್ಸ್‌ ಫ್ಯಾಕ್ಟ್ ಚೆಕ್‌ ತಂಡ ಪರಿಶೀಲನೆ ನಡೆಸಿದೆ. ಆಗ ಇದೊಂದು ಸುಳ್ಳುಸುದ್ದಿ ಎಂಬುದು ಪತ್ತೆಯಾಗಿದೆ. 2017ರಲ್ಲಿ ಲಡಾಖ್‌ನ ಪಾಂಗೊಂಗ್‌ ಸರೋವರ ಪ್ರದೇಶದಲ್ಲಿ ಭಾರತದ ಯೋಧರು ಮತ್ತು ಚೀನಾ ಯೋಧರ ನಡುವೆ ಘರ್ಷಣೆ ನಡೆದಿತ್ತು. ಆಗ ಒಂದು ವಿಡಿಯೋ ಶೂಟ್‌ ಮಾಡಲಾಗಿತ್ತು. ಆ ವಿಡಿಯೋದಿಂದ ‘ಜಿಫ್‌’ ಫೈಲ್‌ ಸೃಷ್ಟಿಸಿ ಅದನ್ನು ಇವಾ ಝೆಂಗ್‌ ಹಾಗೂ ಇನ್ನೂ ಅನೇಕರು ಟ್ವೀಟ್‌ ಮಾಡಿದ್ದಾರೆ.

- ವೈರಲ್ ಚೆಕ್ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್
ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!