ಅಕ್ಕನ ಸಾವಿಗೆ ನಕ್ಸಲರು ಕಾರಣರಲ್ಲ ಅವಳ ಎಡಪಂಥೀಯ ಸಿದ್ಧಾಂತಗಳೇ ಕಾರಣ: ಕವಿತಾ ಲಂಕೇಶ್

Published : Sep 07, 2017, 06:56 PM ISTUpdated : Apr 11, 2018, 12:54 PM IST
ಅಕ್ಕನ ಸಾವಿಗೆ ನಕ್ಸಲರು ಕಾರಣರಲ್ಲ ಅವಳ ಎಡಪಂಥೀಯ ಸಿದ್ಧಾಂತಗಳೇ ಕಾರಣ: ಕವಿತಾ ಲಂಕೇಶ್

ಸಾರಾಂಶ

ಅತಿಯಾದ ಎಡಪಂಥೀಯ ಚಿಂತನೆಗಳೇ ನನ್ನ ಅಕ್ಕನ ಸಾವಿಗೆ ಕಾರಣ ಎಂದು ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಹೇಳಿದ್ದಾರೆ.

ಬೆಂಗಳೂರು (ಸೆ.07): ಅತಿಯಾದ ಎಡಪಂಥೀಯ ಚಿಂತನೆಗಳೇ ನನ್ನ ಅಕ್ಕನ ಸಾವಿಗೆ ಕಾರಣ ಎಂದು ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಹೇಳಿದ್ದಾರೆ.

ಗೌರಿ ಲಂಕೇಶ್ ಸಾವಿನ ಹಿಂದೆ ನಕ್ಸಲರ ಕೈವಾಡವಿರಬಹುದೇ ಎನ್ನುವ ಅನುಮಾನವನ್ನು ಕವಿತಾ ಲಂಕೇಶ್ ತಳ್ಳಿ ಹಾಕಿದ್ದು, ನನ್ನ ಅಕ್ಕ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರುತ್ತಿದ್ದರು. ಆಕೆಗೆ ನಕ್ಸಲಿಸಂ ಬಗ್ಗೆ ದ್ವೇಷ ರಲಿಲ್ಲ. ನಿಮ್ಮ ಗನ್ ಅನ್ನು ಕೆಳಗಿಟ್ಟು ಸಮಾಜದ ಮುಖ್ಯವಾಹಿನಿಗೆ ಬನ್ನಿ ಎಂದು ಹೇಳುತ್ತಿದ್ದರು. ನಕ್ಸಲರಿಂದ ಬೆದರಿಕೆ ಎಂದು ನಾನು ಯೋಚಿಸುವುದಿಲ್ಲ. ಅವರು ಇದೇ ರೀತಿ ಸಾಕಷ್ಟು ಹೋರಾಟವನ್ನು ಮಾಡಿದ್ದರು ಎಂದು ಕವಿತಾ ಲಂಕೇಶ್ ಹೇಳಿದ್ದಾರೆ.

ಗೌರಿ ಲಂಕೇಶ್ ತನಗೆ ಬೆದರಿಕೆ ಎನ್ನುವುದನ್ನು ಯಾವತ್ತೂ ಹೇಳಿರಲಿಲ್ಲ. ಆಕೆಗೆ ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ಅಪಾರವಾದ ನಂಬಿಕೆಯಿತ್ತು. ಹಂತಕರು ಕೇವಲ ಗೌರಿಯನ್ನು ಮಾತ್ರ ಸಾಯಿಸಿಲ್ಲ. ಜೊತೆಗೆ ಅವರ ವೈಚಾರಿಕ ಸಿದ್ಧಾಂತಗಳು, ಅವರ ಧ್ವನಿಯನ್ನು ಸಾಯಿಸಿದ್ದಾರೆ. ಅಕ್ಕನ ಎಡಪಂಥೀಯ ಸಿದ್ಧಾಂತಗಳೇ ಅವರ ಸಾವಿಗೆ ಕಾರಣವಾಯಿತು. ಸಾವಿಗೆ ನ್ಯಾಯ ಸಿಗುವವರೆಗೆ ಹೋರಾಡುತ್ತೇವೆ ಎಂದು ಕವಿತಾ ಲಂಕೇಶ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಡಿಯೋ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಅವಮಾನ: ಶಹಬಾಜ್ ಷರೀಫ್‌ರನ್ನು ನಿರ್ಲಕ್ಷಿಸಿದ ಪುಟಿನ್!
ಯುಎಇ ಕಠಿಣ ಕಾನೂನು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ, ವೇಶ್ಯಾವಾಟಿಕೆಗೆ ಶಿಕ್ಷೆ ಪ್ರಮಾಣ ಭಾರೀ ಹೆಚ್ಚಳ!