
ನವದೆಹಲಿ: ತಮ್ಮ ಉದ್ಯೋಗದಾತರು ನಿಗದಿತ ಸಮಯಕ್ಕೆ ಸರಿಯಾಗಿ ಹಣ ಕಟ್ಟದಿದ್ದಲ್ಲಿ ನೌಕರರಿಗೆ ಅದರ ಮಾಹಿತಿ ನೀಡುವುದಾಗಿ ಪಿಂಚಣಿ ನಿಧಿ ನಿರ್ವಹಿಸುವ ಇಪಿಎಫ್ಒ ತಿಳಿಸಿದೆ. ಪ್ರಸ್ತುತ ಖಾತೆದಾರರ ಹಣ ಜಮಾವಣೆಯಾದ ಬಳಿಕ, ಖಾತೆದಾರರಿಗೆ ಎಸ್ಎಂಎಸ್/ಇ-ಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ.
ಇನ್ನು ಮುಂದೆ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಮಾಸಿಕ ಹಣ ಜಮಾವಣೆಯಾಗದ ಖಾತೆದಾರರಿಗೂ ಮಾಹಿತಿ ನೀಡಲಾಗುತ್ತದೆ ಎಂದು ನೌಕರರ ಪಿಂಚಣಿ ನಿಧಿ ಸಂಸ್ಥೆ (ಇಪಿಎಫ್ಒ) ತಿಳಿಸಿದೆ. ಇ-ಪಾಸ್ಬುಕ್ ಆನ್ಲೈನ್ ಮತ್ತು ಉಮಂಗ್ ಮೊಬೈಲ್ ಆ್ಯಪ್ ಮತ್ತು ಮಿಸ್ಕಾಲ್ ನೀಡುವ ಮೂಲಕವೂ ಎಲ್ಲ ಸದಸ್ಯರು ಹಣ ಜಮೆ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ