ಎರಡು ವಾರದಲ್ಲಿ ಇಬ್ಬರು ಮಾವುತರನ್ನು ಬಲಿ ಪಡೆದ ಆನೆ

Published : May 04, 2017, 04:53 PM ISTUpdated : Apr 11, 2018, 01:02 PM IST
ಎರಡು ವಾರದಲ್ಲಿ ಇಬ್ಬರು ಮಾವುತರನ್ನು ಬಲಿ ಪಡೆದ ಆನೆ

ಸಾರಾಂಶ

ಎರಡು ವಾರಗಳ ಹಿಂದಷ್ಟೇ ಮಾವುತನೊಬ್ಬನನ್ನು ಬಲಿ ಪಡೆದಿದ್ದ ದುಬಾರೆ ಶಿಬಿರದ ಸಾಕಾನೆಯಾದ ಎಂಟು ವರ್ಷದ ಕಾರ್ತಿಕ ಇದೀಗ ಮತ್ತೊಬ್ಬ ಮಾವುತನನ್ನು ತಿವಿದು ಕೊಂದಿದೆ.

ಕುಶಾಲನಗರ (ಮೇ.04): ಎರಡು ವಾರಗಳ ಹಿಂದಷ್ಟೇ ಮಾವುತನೊಬ್ಬನನ್ನು ಬಲಿ ಪಡೆದಿದ್ದ ದುಬಾರೆ ಶಿಬಿರದ ಸಾಕಾನೆಯಾದ ಎಂಟು ವರ್ಷದ ಕಾರ್ತಿಕ ಇದೀಗ ಮತ್ತೊಬ್ಬ ಮಾವುತನನ್ನು ತಿವಿದು ಕೊಂದಿದೆ.

ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಸಾಕಾನೆ ಶಿಬಿರದ ಮಾವುತ ಮಣಿ (೨೩) ಮೃತಪಟ್ಟವರು. ಮಣಿ ಸಂಜೆ ವೇಳೆ ಆಹಾರ ನೀಡಲು ತೆರಳಿದ ಸಂದರ್ಭದಲ್ಲಿ ಆನೆ ದಂತದಿಂದ ತಿವಿದಿದೆ. ಇದರಿಂದ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಅರಣ್ಯ ವಲಯಾಧಿಕಾರಿ ನೆಹರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ ಮತ್ತಿತರರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಏ.17 ರಂದು ಕಾರ್ತಿಕ ಆನೆ ಅಣ್ಣು ಎಂಬ ಮಾವುತನನ್ನು ತಿವಿದು ಸಾಯಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ಹಿಂದೂ ರಾಷ್ಟ್ರ, ಇದಕ್ಕೆ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ; ಮೋಹನ್ ಭಾಗವತ್
ಕಲಬುರಗಿ: ಮಠದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಸ್ವಾಮೀಜಿ! ಎಸ್ಕೇಪ್ ಆಗಿದ್ದಾತ ಮರಳಿ ಬಂದು ಕೃತ್ಯ