ತಾಕತ್ತಿದ್ದರೆ ವೋಟಿಂಗ್ ಮೆಷೀನ್ ಹ್ಯಾಕ್ ಮಾಡಿ: ಚುನಾವಣಾ ಆಯೋಗದಿಂದ ಓಪನ್ ಚಾಲೆಂಜ್

Published : Apr 12, 2017, 03:08 PM ISTUpdated : Apr 11, 2018, 01:01 PM IST
ತಾಕತ್ತಿದ್ದರೆ ವೋಟಿಂಗ್ ಮೆಷೀನ್ ಹ್ಯಾಕ್ ಮಾಡಿ: ಚುನಾವಣಾ ಆಯೋಗದಿಂದ ಓಪನ್ ಚಾಲೆಂಜ್

ಸಾರಾಂಶ

ಚುನಾವಣಾ ಆಯೋಗ 2009ರಲ್ಲೂ ಕೂಡ ಇಂಥದ್ದೇ ರೀತಿಯಲ್ಲಿ ಇವಿಎಂ ಮೆಷೀನ್ ಹ್ಯಾಕ್ ಮಾಡಲು ಓಪನ್ ಚಾಲೆಂಜ್ ಹಾಕಿತ್ತು. ಆಗ ಯಾರಿಗೂ ಕೂಡ ಅದನ್ನು ಹ್ಯಾಕ್ ಮಾಡಲು ಆಗಿರಲಿಲ್ಲವಂತೆ.

ನವದೆಹಲಿ(ಏ. 12): ಪಂಚರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಪಾಳಯಕ್ಕೆ ಹೆಚ್ಚು ಗೆಲುವು ಪ್ರಾಪ್ತವಾಗಲು ವೋಟಿಂಗ್ ಮೆಷೀನ್ ದುರುಪಯೋಗವೇ ಕಾರಣ ಎಂದು ಆರೋಪಿಸುತ್ತಿರುವ ವಿರೋಧ ಪಕ್ಷಗಳನ್ನು ಚುನಾವಣಾ ಆಯೋಗ ಇಂದು ಬುಧವಾರ ತರಾಟೆಗೆ ತೆಗೆದುಕೊಂಡಿದೆ. ತಾಕತ್ತಿದ್ದರೆ ಇವಿಎಂ ಮೆಷೀನ್'ಗಳನ್ನು ಹ್ಯಾಕ್ ಮಾಡಿ ನೋಡಿ ಎಂದು ಬಹಿರಂಗ ಸವಾಲು ಹಾಕಿದೆ. "ಮೇ ತಿಂಗಳ ಮೊದಲ ವಾರದಲ್ಲಿ ಯಾವುದೇ ತಂತ್ರಜ್ಞರು, ವಿಜ್ಞಾನಿಗಳು ಬಂದು ಇವಿಎಂ ಮೆಷೀನ್ ಹ್ಯಾಕ್ ಮಾಡಲು ಯತ್ನಿಸಲಿ. ಇಡೀ ಒಂದು ವಾರ ಸಮಯ ತೆಗೆದುಕೊಳ್ಳಲಿ. ಬೇಕಾದರೆ 10 ದಿನ ಸಮಯವನ್ನೂ ನೀಡುತ್ತೇವೆ. ತಾಕತ್ತಿದ್ದರೆ ಹ್ಯಾಕ್ ಮಾಡಿ ತೋರಿಸಲಿ" ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ, ಅದರಲ್ಲೂ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಪಡೆದಿತ್ತು. ವೋಟಿಂಗ್ ಮೆಷೀನ್'ಗಳನ್ನು ಅಗಾಧ ಪ್ರಮಾಣದಲ್ಲಿ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಕಾಂಗ್ರೆಸ್, ಆಮ್ ಆದ್ಮಿ ಸೇರಿದಂತೆ ಹಲವು ವಿರೋಧ ಪಕ್ಷಗಳು ಗಂಭೀರವಾಗಿ ಆರೋಪಿಸಿವೆ. ಲೋಕಲಭೆಯಲ್ಲಿ ಈ ವಿಷಯವು ಹಲವು ಕಲಾಪಗಳನ್ನೇ ನುಂಗಿಹಾಕಿತು.

ಚುನಾವಣಾ ಆಯೋಗವು ಇವಿಎಂ ಮೆಷೀನ್'ನ್ನು ಹ್ಯಾಕ್ ಮಾಡಲು, ದುರುಪಯೋಗಿಸಲು ಸಾಧ್ಯವಿಲ್ಲ ಎಂದು ಹಲವು ಬಾರಿ ಹೇಳುತ್ತಲೇ ಬಂದಿದೆ. ಇವಿಎಂ ಮೆಷೀನ್ ತಯಾರಿಸಿದ ಸಂಸ್ಥೆಗೇ ಅದನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದೂ ಆಯೋಗವು ಹೇಳಿದೆ.

ಚುನಾವಣಾ ಆಯೋಗ 2009ರಲ್ಲೂ ಕೂಡ ಇಂಥದ್ದೇ ರೀತಿಯಲ್ಲಿ ಇವಿಎಂ ಮೆಷೀನ್ ಹ್ಯಾಕ್ ಮಾಡಲು ಓಪನ್ ಚಾಲೆಂಜ್ ಹಾಕಿತ್ತು. ಆಗ ಯಾರಿಗೂ ಕೂಡ ಅದನ್ನು ಹ್ಯಾಕ್ ಮಾಡಲು ಆಗಿರಲಿಲ್ಲವಂತೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!
ಯಕ್ಷಗಾನ ಕಲಾವಿದರ ಅಪಮಾನ: 'ಬಿಳಿಮಲೆಗೆ ಒಂದು ನೋಟಿಸ್ ಕೊಡೋಕೂ ಕಷ್ಟವೇ? ಸುನೀಲ್ ಕುಮಾರ್ ಪ್ರಶ್ನೆ, ಈ ವಿಷಯ ದೊಡ್ಡದು ಮಾಡೋದು ಬೇಡ ಎಂದ ತಂಗಡಗಿ