
ನವದೆಹಲಿ(ಮೇ.17]: ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಇರುವ ವ್ಯಾವಹಾರಿಕ ತೊಂದರೆಗಳನ್ನು ಪಟ್ಟಿ ಮಾಡುವಂತೆ ಚುನಾವಣಾ ಆಯೋಗಕ್ಕೆ ಕಾನೂನು ಆಯೋಗ ಸೂಚಿಸಿದೆ. ಅಲ್ಲದೆ, ಈ ಸಂಬಂಧದ ಕಾನೂನು ಚೌಕಟ್ಟು ಕುರಿತ ಪ್ರಸ್ತಾಪದ ಬಗ್ಗೆ ನಿಲುವುಗಳನ್ನು ವ್ಯಕ್ತಪಡಿಸುವಂತೆಯೂ ಕೋರಲಾಗಿದೆ.
ಎರಡೂ ಚುನಾವಣೆಗಳನ್ನು ಒಟ್ಟಿಗೆ ನಡೆಸುವುದರ ಬಗ್ಗೆ ಮುಖ್ಯಚುನಾವಣಾ ಆಯುಕ್ತರು ಮತ್ತು ಇತರ ಆಯುಕ್ತರುಗಳ ಜೊತೆ ಕಾನೂನು ಆಯೋಗದ ಹಿರಿಯ ಸಿಬ್ಬಂದಿ ಬುಧವಾರ ಸಭೆ ನಡೆಸಿ, ವ್ಯಾಪಕ ಚರ್ಚೆ ನಡೆಸಿದರು. ಹಣಕಾಸು, ಭದ್ರತೆ, ಚುನಾವಣಾ ಸಿಬ್ಬಂದಿ, ಇವಿಎಂಗಳು ಮುಂತಾದ ವಿಷಯಗಳಿಗೆ ಸಂಬಂಧಿಸಿ ಇರುವ ಪ್ರಾಯೋಗಿಕ ತೊಂದರೆಯ ಬಗ್ಗೆ ವಿವರಣೆ ನೀಡುವಂತೆ ಚುನಾವಣಾ ಆಯೋಗಕ್ಕೆ ಕಾನೂನು ಆಯೋಗ ಕೋರಿದೆ.
ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಜೊತೆಯಾಗಿ ನಡೆಸುವ ಪ್ರಸ್ತಾಪ ಇತ್ತೀಚೆಗೆ ಚರ್ಚೆಯಲ್ಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.