ಮಾನವೀಯತೆ ಮೆರೆದ ದುನಿಯಾ ವಿಜಯ್​

Published : Oct 20, 2016, 03:10 AM ISTUpdated : Apr 11, 2018, 12:39 PM IST
ಮಾನವೀಯತೆ ಮೆರೆದ ದುನಿಯಾ ವಿಜಯ್​

ಸಾರಾಂಶ

ಲಕ್ಷ್ಮಮ್ಮ ಶಿಕ್ಷೆ ಅನುಭವಿಸಿದ್ದರೂ ದಂಡ ಕಟ್ಟಲು ಹಣವಿಲ್ಲದೆ ಜೈಲಿನಲ್ಲೇ ಉಳಿದುಕೊಂಡಿದ್ದರು. ವಿಷಯ ತಿಳಿದ ನಟ ದುನಿಯಾ ವಿಜಿ ಮೈಸೂರು ಜೈಲಿಗೆ ಆಗಮಿಸಿ ಈಕೆ ಪರವಾಗಿ ಹಣ ಕಟ್ಟಿ ಲಕ್ಷ್ಮಮ್ಮ ಅವರನ್ನು ಬಿಡುಗಡೆಯಾಗುವಂತೆ ಮಾಡಿದ್ದಾರೆ.

ಮೈಸೂರು (ಅ.20): ಶಿಕ್ಷೆ ಮುಗಿಸಿದರೂ ಜೈಲಿನಲ್ಲಿದ್ದ ಮಹಿಳಾ ಖೈದಿಯನ್ನು 22 ಸಾವಿರ ಹಣ ಕಟ್ಟಿ ಬಿಡುಗಡೆಯಾಗುವಂತೆ ಮಾಡಿ ನಟ ದುನಿಯಾ ವಿಜಿ ಮಾನವೀಯತೆ ಮೆರೆದಿದ್ದಾರೆ.

ಮೈಸೂರಿನ ಕೇಂದ್ರ ಕಾರಾಗೃಹದಲ್ಲಿದ್ದ ಲಕ್ಷ್ಮಮ್ಮ ದುನಿಯಾ ವಿಜಿ ಕಟ್ಟಿದ ಹಣದಿಂದಾಗಿ ಬಿಡುಗಡೆಯಾದ ಖೈದಿ.

ಹಾಸನ ಜಿಲ್ಲೆ ಸಕಲೇಶಪುರದವರಾದ ಲಕ್ಷ್ಮಮ್ಮ ಗಲಾಟೆ ಪ್ರಕರಣದಲ್ಲಿ 7 ವರ್ಷ ಶಿಕ್ಷೆಗೆ ಒಳಗಾಗಿ ಮೈಸೂರು ಜೈಲು ಸೇರಿದ್ದರು.

ಹಾಸನ ಜಿಲ್ಲಾ ನ್ಯಾಯಾಲಯ ಇವರಿಗೆ ಶಿಕ್ಷೆ ಹಾಗೂ 22 ಸಾವಿರ ದಂಡ ವಿಧಿಸಿತ್ತು. ಲಕ್ಷ್ಮಮ್ಮ ಶಿಕ್ಷೆ ಅನುಭವಿಸಿದ್ದರೂ ದಂಡ ಕಟ್ಟಲು ಹಣವಿಲ್ಲದೆ ಜೈಲಿನಲ್ಲೇ ಉಳಿದುಕೊಂಡಿದ್ದರು.

ವಿಷಯ ತಿಳಿದ ನಟ ದುನಿಯಾ ವಿಜಿ ಮೈಸೂರು ಜೈಲಿಗೆ ಆಗಮಿಸಿ ಈಕೆ ಪರವಾಗಿ ಹಣ ಕಟ್ಟಿ ಲಕ್ಷ್ಮಮ್ಮ ಅವರನ್ನು ಬಿಡುಗಡೆಯಾಗುವಂತೆ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಟ್ಕಳ ತಹಸೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ: ಇಮೇಲ್‌ನಲ್ಲಿ ಡಿಎಂಕೆ ವಿರುದ್ಧ ಅಸಂಬದ್ಧ ಆರೋಪ
ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 7 ಬಸ್ 3 ಕಾರುಗಳ ಮಧ್ಯೆ ಸರಣಿ ಅಪಘಾತ : ನಾಲ್ವರು ಬೆಂಕಿಗಾಹುತಿ