
ತುರುವೇಕೆರೆ(ನ.20): ಇಲ್ಲಿನ ಬೆನಕನ ಕೆರೆ-ತುರುವೆಕೆರೆ ಮಾರ್ಗದ ಚಾಲಕ ತಮ್ಮ ಸಾವಿನಲ್ಲಿ ಸಾರ್ಥಕತೆ ಮೆರೆದು 40 ಮಂದಿಯ ಪ್ರಾಣ ಉಳಿಸಿದ್ದಾನೆ.
40 ಮಂದಿಯ ಪ್ರಾಣ ಉಳಿಸಿದ ಪುಣ್ಯಾತ್ಮ ಚಾಲಕನ ಹೆಸರು ಕೃಷ್ಣ. ಈತ ಬೆನಕನ ಕೆರೆಯಿಂದ ತುರುವೇಕೆರೆಗೆ ಬಸ್ ಚಲಾಯಿಸುತ್ತಿದ್ದ. ದೇವಿಹಳ್ಳಿ ಗೇಟ್ ಬಳಿ ಚಲಾಯಿಸುತ್ತಿದ್ದಾಗ ಚಾಲಕ ಕೃಷ್ಣ'ಗೆ ಹೃದಯಾಘಾತವಾಗಿದೆ. ತನ್ನ ನೋವನ್ನು ಅರಿತ ಆತ ತಕ್ಷಣ ಬಸ್ ನಿಲ್ಲಿಸಿದ್ದಾನೆ.
ನಂತರ ಕೆಲವು ಕ್ಷಣಗಳಲ್ಲಿ ಈತನ ಪ್ರಾಣ ಹೋಗಿದೆ. ತನ್ನ ಪ್ರಾಣ ಕೊಟ್ಟು ಜೀವ ತ್ಯಾಗ ಮಾಡಿದ ಚಾಲಕನಿಗೆ ಬಸ್'ನಲ್ಲಿದ ಪ್ರಯಾಣಿಕರು ಕಂಬಿನಿ ಮಿಡಿದರು.
(ಕಾಲ್ಪನಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.