ಅಳಿಯ ವೀರೇಂದ್ರ ಪರ ನಟ ದೊಡ್ಡಣ್ಣ ಪ್ರಚಾರ

Published : Apr 12, 2018, 07:13 AM ISTUpdated : Apr 14, 2018, 01:13 PM IST
ಅಳಿಯ ವೀರೇಂದ್ರ ಪರ ನಟ ದೊಡ್ಡಣ್ಣ ಪ್ರಚಾರ

ಸಾರಾಂಶ

ವೀರೇಂದ್ರ ಇದ್ದಾನಲ್ಲ, ಅಂದ್ರೆ ಪಪ್ಪಿ ನನ್ನ ಅಳಿಯ ಕಣ್ರವ್ವ. ವೋಟು ಹಾಕಿ ವಿಧಾನಸೌಧಕ್ಕೆ ಕಳಿಸಿ. ನಿಮ್‌ ಹಳ್ಳಿಗಳು ಹೆಂಗೆ ಉದ್ಧಾರ ಮಾಡ್ತಾನೆ ನೋಡ್ತಾ ಇರಿ!

ಚಿತ್ರದುರ್ಗ : ವೀರೇಂದ್ರ ಇದ್ದಾನಲ್ಲ, ಅಂದ್ರೆ ಪಪ್ಪಿ ನನ್ನ ಅಳಿಯ ಕಣ್ರವ್ವ. ವೋಟು ಹಾಕಿ ವಿಧಾನಸೌಧಕ್ಕೆ ಕಳಿಸಿ. ನಿಮ್‌ ಹಳ್ಳಿಗಳು ಹೆಂಗೆ ಉದ್ಧಾರ ಮಾಡ್ತಾನೆ ನೋಡ್ತಾ ಇರಿ!

ಹಾಸ್ಯ ನಟ ದೊಡ್ಡಣ್ಣ ಚಿತ್ರದುರ್ಗದ ಹಳ್ಳಿಗಳಿಗೆ ತೆರಳಿ ಮಹಿಳೆಯರ ಮುಂದೆ ನಿವೇದಿಸಿಕೊಳ್ಳುತ್ತಿರುವ ಪರಿ ಇದು. ಚಿತ್ರದುರ್ಗ ವಿಧಾನಸಭೆ ಚುನಾವಣೆ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿರುವ ಉದ್ಯಮಿ ಕೆ.ಸಿ.ವೀರೇಂದ್ರ ಪರ ಮಾವ ದೊಡ್ಡಣ್ಣ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ದೊಡ್ಡಣ್ಣ ಹಳ್ಳಿಗಳಿಗೆ ಹೋಗುತ್ತಿದ್ದಂತೆ ಜನ, ಯುವಕರು ಮುತ್ತಿ ಕೊಳ್ಳುತ್ತಿದ್ದಾರೆ. ‘ಚೆಂದಾಕಿದ್ದೀರವ್ವ ’ಎಂದು ಮಾತಿಗಿಳಿಯುವ ದೊಡ್ಡಣ್ಣ ಹಾಸ್ಯ ಮಿಶ್ರಿತ ಧಾಟಿಯಲ್ಲಿ ಮತ ಯಾಚಿಸುತ್ತಿದ್ದಾರೆ. ತೆನೆಹೊತ್ತ ಮಹಿಳೆಗೆ ಮತ ಹಾಕೋದ ಮರಿಬೇಡಿ. ನಿಮ್ಮ ಸಮಸ್ಯೆ ಹೊರೆ ಇಳಿಸಲು ನಮ್ಮ ಪಪ್ಪಿ ಇರ್ತಾನೆ ಎನ್ನುತ್ತಿದ್ದಾರೆ. ಸಿನಿಮಾಗಳಲ್ಲಿ ರಾಜಕಾರಣಿ ಪಾತ್ರ ಮಾಡಿ ನಿರರ್ಗಳ ಭಾಷಣ ಮಾಡುವ ಅಭ್ಯಾಸ ಮಾಡಿಕೊಂಡಿರುವ ದೊಡ್ಡಣ್ಣ ಅದೇ ಸಿನಿಮಾ ಡೈಲಾಗ್‌ ಗಳ ಜನರ ಮುಂದೆ ಹರಿಯಬಿಡುತ್ತಿದ್ದಾರೆ.

ಆದರೆ, ಮಾವ ಮತ್ತು ಅಳಿಯ ಜೊತೆಗೆ ಹೋಗದೆ ಪ್ರತ್ಯೇಕವಾಗಿ ಹಳ್ಳಿಗಳ ಸುತ್ತುತ್ತಿರುವುದು ಮತ್ತೊಂದು ವಿಶೇಷ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾಳೆ ಅರ್ಧ ಬೆಂಗಳೂರಿಗೆ ನೀರು ಪೂರೈಕೆ ಸ್ಥಗಿತ: ಕಾವೇರಿ 5ನೇ ಹಂತದ ಪೈಪ್‌ಲೈನ್‌ನಲ್ಲಿ ಸೋರಿಕೆ!
ಚಿನ್ನದ ಬೆಲೆ ಲಕ್ಷ ದಾಟಿದ ಬೆನ್ನಲ್ಲೇ ಕರ್ನಾಟಕದ ಈ ಜಿಲ್ಲೆಗೆ ಜಾಕ್‌ಪಾಟ್‌, ಭಾರೀ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆ!