
ಮಂಡ್ಯ(ಸೆ.14): ಕಾವೇರಿ ಹೋರಾಟದಲ್ಲಿ ಮೃತಪಟ್ಟ ಉಮೇಶ್ ಮತ್ತು ಕುಮಾರ್ ಕುಟುಂಬಕ್ಕೆ ೫ ಲಕ್ಷ ಧನಸಹಾಯ ಮಾಡಿದ್ದೇವೆ ಎಂದು ನಾಗಮಂಗಲ ಶಾಸಕ ಚಲುವರಾಯಸ್ವಾಮಿ ಹೇಳಿದ್ದಾರೆ.
ಬಂಗಾರಪ್ಪ ಬಿಟ್ರೆ ಯಾರು ಕೂಡಾ ಧೃಢ ನಿರ್ಧಾರ ತಗೊಂಡಿಲ್ಲ. ತುಂಬಾ ಜನ ರಾಜೀನಾಮೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಹೋರಾಟ ಮಾಡಬೇಕಾಗಿರುವುದು ದೆಹಲಿಯಲ್ಲೇ ವಿನಾ ಕರ್ನಾಟಕದಲ್ಲಿ ಅಲ್ಲ. ಸುಪ್ರೀಮ್ ಕೋರ್ಟ್'ಗೆ ಈ ರೀತಿಯ ತೀರ್ಪು ನೀಡಲು ಎಷ್ಟರ ಮಟ್ಟಿಗೆ ಅಧಿಕಾರ ಇದೆ ಅನ್ನೋದು ಕೂಡಾ ಚರ್ಚೆ ಆಗಬೇಕಾಗಿದೆ. ಪ್ರಧಾನಿ ಬಿಜೆಪಿಯವರ ಆಸ್ತಿ ಅಲ್ಲ . ಅವತ್ತಿನ ರಾಜಕಾರಣ ಮಾಡಿಕೊಳ್ಳೋದಾದರೆ ಈ ಸಮಸ್ಯೆ ಬಗಹರಿಯಲ್ಲ . ಒಕ್ಕೂಟ ವ್ಯವಸ್ಥೆಯಿಂದ ನಮ್ಮನ್ನ ಕೈಬಿಡಿ ಎಂದು ಒತ್ತಾಯಿಸಬೇಕಾದ ಪರಿಸ್ಥಿತಿ ಇದೆ. ಘೋಷಣೆ ಕೂಗಿ ಹೋರಾಟ ಮಾಡೋದು ಶೋಭೆ ತರಲ್ಲ. ನಾವೆಲ್ಲರೂ ಗೋಮುಖ ವ್ಯಾಘ್ರತನ ಬಿಟ್ಟು ಹೋರಾಟ ಮಾಡೋಣ. ರಾಜ್ಯದ ಸಂಸದರು ಮೌನ ತಳೆದಿರುವುದು ಸರಿಯಲ್ಲ ಎಂದು ನಾಗಮಂಗಲ ಶಾಸಕ ಚಲುವರಾಯಸ್ವಾಮಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.