
ನವದೆಹಲಿ[ಡಿ.31]: ಅಟಲ್ ಬಿಹಾರಿ ವಾಜಪೇಯಿ ಅವರು ಕಾಂಗ್ರೆಸ್ ಬಗ್ಗೆ ಪಾರ್ಲಿಮೆಂಟಲ್ಲಿ ಹೀಗೆ ಹೇಳಿದ್ದರು ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಒಮ್ಮೆ ಪಾರ್ಲಿಮೆಂಟಿನಲ್ಲಿ ವಾಜಪೇಯಿ ‘ಕಾಂಗ್ರೆಸ್ನ ಅರ್ಧ ಸದಸ್ಯರು ಮೂರ್ಖರು’ ಎಂದು ಹೇಳಿದ್ದರು. ಆಗ ಸಭಾಪತಿ ತಮ್ಮ ಮಾತನ್ನು ವಾಪಸ್ ತೆಗೆದುಕೊಳ್ಳುವಂತೆ ಹೇಳಿದಾಗ ‘ಕಾಂಗ್ರೆಸ್ನ ಅರ್ಧ ಸದಸ್ಯರು ಮೂರ್ಖರಲ್ಲ ಎಂದಿದ್ದರು’ ಎನ್ನಲಾಗಿದೆ. ಸದ್ಯ ವಾಜಪೇಯಿ ಹೇಳಿದ್ದಾರೆ ಎನ್ನಲಾದ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ನಿಜಕ್ಕೂ ಅಟಲ್ ಹೀಗೆ ಹೇಳಿದ್ದರೇ ಎಂದು ಕ್ವಿಂಟ್ 1962ರ ಪಾರ್ಲಿಮೆಂಟ್ ಚರ್ಚೆಯನ್ನು ಅಧಿಕೃತ ರಾಜ್ಯಸಭಾ ವೆಬ್ಸೈಟ್ನಲ್ಲಿ ಪರಿಶೀಲಿಸಿದಾಗ ಇದೊಂದು ನಕಲಿ ಹೇಳಿಕೆ ಎಂಬುದು ಸಾಬೀತಾಗಿದೆ. ಆಗ ವಾಜಪೇಯಿ ರಾಜ್ಯಸಭೆಯ ಸದಸ್ಯರಾಗಿದ್ದರು. ಅಲ್ಲದೆ ಹಿರಿಯ ರಾಜಕೀಯ ನಿರೂಪಕಿ ಆರತಿ ಜೇರತ್ ವಾಜಪೇಯಿ ಈ ಹೇಳಿಕೆ ನೀಡಿದ್ದಾರೆನ್ನುವುದನ್ನು ಅಲ್ಲಗಳೆದಿದ್ದಾರೆ.‘ ವಾಜಪೇಯಿ ಹಾಗೆ ಹೇಳಿದ್ದರು ಎಂದು ನಾನೆಂದೂ ಕೇಳಿಲ್ಲ. ಅಲ್ಲದೆ ಅಟಲ್ ಈ ರೀತಿ ಭಾಷೆಯನ್ನೇ ಬಳಸುತ್ತಿರಲಿಲ್ಲ. ಪಾರ್ಲಿಮೆಂಟಿನಲ್ಲಿ ಅವರ ಚರ್ಚೆಯು ಎಂದಿಗೂ ಸ್ವಾರಸ್ಯಕರವಾಗಿರುತ್ತಿತ್ತು. ಅವರು ಎಂದಿಗೂ ವೈಯಕ್ತಿಕವಾಗಿ ದಾಳಿ ಮಾಡುತ್ತಿರಲಿಲ್ಲ’ ಎಂದಿದ್ದಾರೆ.
ಅಲ್ಲದೆ ಇದೇ ರೀತಿಯ ಹೇಳಿಕೆ ಹಲವಾರು ಜಾಗತಿಕ ಜನರ ಹೆಸರಿನಲ್ಲಿಯೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಬ್ರಿಟನ್ನ ಮಾಜಿ ಪ್ರಧಾನಿ ಬಂಜಮಿನ್ ವಿರೋಧ ಪಕ್ಷಗಳ ಅರ್ಧ ಜನ ಸದಸ್ಯರು ಮೂರ್ಖರು’ ಎಮದು ಹೇಳಿದ್ದಾರೆಂಬ ಹೇಳಿಕೆ ಹರಿದಾಡಿತ್ತು. ಇದೂ ಕೂಡ ಅಂಥದ್ದೇ ಸುಳ್ಳು ಹೇಳಿಕೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ