ಅಖಾಡಕ್ಕಿಳಿಯಲಿದ್ದಾರೆ ಗೌಡರ ಮೊಮ್ಮಕ್ಕಳು; ದೊಡ್ಡಗೌಡರ ಗ್ರೀನ್ ಸಿಗ್ನಲ್

Published : Oct 13, 2017, 10:32 PM ISTUpdated : Apr 11, 2018, 01:04 PM IST
ಅಖಾಡಕ್ಕಿಳಿಯಲಿದ್ದಾರೆ ಗೌಡರ ಮೊಮ್ಮಕ್ಕಳು;  ದೊಡ್ಡಗೌಡರ ಗ್ರೀನ್ ಸಿಗ್ನಲ್

ಸಾರಾಂಶ

ಜೆಡಿಎಸ್​ನಲ್ಲೀಗ ಗೌಡರ ಮೊಮ್ಮಕ್ಕಳ ಹವಾ ಶುರುವಾಗಿದೆ. ಇದಕ್ಕೆ ಸ್ವತಃ ದೇವೇಗೌಡರೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕುಮಾರಸ್ವಾಮಿ ಅನಾರೋಗ್ಯ ಹಿನ್ನೆಲೆ ನಿಖಿಲ್​ ಕುಮಾರ್​ ಪ್ರಚಾರದಲ್ಲಿ ತೊಡಗ್ತಾರೆ ಅನ್ನೋ ಮಾತಿಗೆ ಗೌಡರು ಹೌದು ಎಂದಿದ್ದಾರೆ. ಈ ಮೂಲಕ ದೇವೇಗೌಡರ ಮಾಸ್ಟರ್​ ಪ್ಲಾನ್ ಬಗ್ಗೆ ಭಾರೀ ಚರ್ಚೆಯೂ ಶುರುವಾಗಿದೆ.

ಬೆಂಗಳೂರು (ಅ.13): ಜೆಡಿಎಸ್​ನಲ್ಲೀಗ ಗೌಡರ ಮೊಮ್ಮಕ್ಕಳ ಹವಾ ಶುರುವಾಗಿದೆ. ಇದಕ್ಕೆ ಸ್ವತಃ ದೇವೇಗೌಡರೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕುಮಾರಸ್ವಾಮಿ ಅನಾರೋಗ್ಯ ಹಿನ್ನೆಲೆ ನಿಖಿಲ್​ ಕುಮಾರ್​ ಪ್ರಚಾರದಲ್ಲಿ ತೊಡಗ್ತಾರೆ ಅನ್ನೋ ಮಾತಿಗೆ ಗೌಡರು ಹೌದು ಎಂದಿದ್ದಾರೆ. ಈ ಮೂಲಕ ದೇವೇಗೌಡರ ಮಾಸ್ಟರ್​ ಪ್ಲಾನ್ ಬಗ್ಗೆ ಭಾರೀ ಚರ್ಚೆಯೂ ಶುರುವಾಗಿದೆ.

ವಿಧಾನಸಭೆ ಚುನಾವಣೆಗೆ ಎಲ್ಲ ಪಕ್ಷಗಳು ಭಾರೀ ಸಿದ್ಧತೆ ನಡೆಸಿವೆ. ಜೆಡಿಎಸ್​ ಪಕ್ಷ ಕೂಡಾ ಹಿಂದೆ ಬಿದ್ದಿಲ್ಲ. ಆದ್ರೆ ಜೆಡಿಎಸ್​ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೃದಯ ಶಸ್ತ್ರಚಿಕಿತ್ಸೆ ಹಿನ್ನೆಲೆ ಸ್ವಲ್ಪ ಮಂಕಾಗಿದೆ. ದೇವೇಗೌಡರು ಪಕ್ಷದ ಮುಂಚೂಣಿಯಲ್ಲಿ ನಿಂತಿದ್ದಾರೆ. ಈಗ ಅವರ ಮೊಮ್ಮಕ್ಕಳು ದೇವೇಗೌಡರಿಗೆ ಸಾಥ್​ ನೀಡಲಿದ್ದಾರೆ. ಇದಕ್ಕೆ ಖುದ್ದು ದೇವೇಗೌಡರೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕುಮಾರಸ್ವಾಮಿ ಅನಾರೋಗ್ಯ ಹಿನ್ನೆಲೆಯಲ್ಲಿ ನಾನು ಪ್ರಚಾರದಲ್ಲಿ ತೊಡಗಿಕೊಳ್ಳುತ್ತೇನೆ ಅಂತಾ ಸ್ವತಃ ನಿಖಿಲ್ ಕುಮಾರ್​ ಹೇಳಿದ್ದಾರೆ. ಅಪ್ಪನ ಪರವಾಗಿ ಪ್ರಚಾರ ಮಾಡ್ತೀನಿ ನಾನೇಕೆ ಬೇಡವೆನ್ನಲಿ ಎಂದು ದೇವೇಗೌಡ ಹೇಳಿದ್ದಾರೆ.

ರೇವಣ್ಣ ಅವರ ಮಗ ಪ್ರಜ್ವಲ್ ಈಗಾಗಲೇ ರಾಜಕೀಯದಲ್ಲಿ ತೊಡಗಿ ಭಾರೀ ಸದ್ದು ಮಾಡ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಕೆಲವರು ಬಕೆಟ್​ಗಳು ನನಗೆ ತೊಂದರೆ ಮಾಡಿದರು ಅಂತಾ ಗುಡುಗಿದರು. ಇದರ ಬೆನ್ನಲ್ಲೇ ರಾಜರಾಜೇಶ್ವರಿ ನಗರದಿಂದ ಪ್ರಜ್ವಲ್ ಸ್ಪರ್ಧಿಸ್ತಾರೆ ಅನ್ನೋ ಮಾತು ಹರಿದಾಡುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನ 2ನೇ ಏರ್‌ಪೋರ್ಟ್‌, ಗುರುತಿಸಿರೋ ಈ 3 ಸ್ಥಳಗಳಲ್ಲಿ ಯಾವುದು ಬೆಸ್ಟ್? ಅಧ್ಯಯನಕ್ಕೆ ಟೆಂಡರ್ ಕರೆದ ಸರ್ಕಾರ!
ನವೋದಯ ಪರೀಕ್ಷೆಯಲ್ಲಿ ಅಕ್ರಮ ಆರೋಪ; ಬೀದರ್‌ನಲ್ಲಿ ಬಿಇಓಗೆ ವಿದ್ಯಾರ್ಥಿ ಪೋಷಕರಿಂದ ತರಾಟೆ