ದೀಪಾವಳಿ ಪಟಾಕಿ ಹೊಡೆಯುವ ಮುನ್ನ ವಾಣಿಜ್ಯ ಮಂಡಳಿಯ ಈ ನಿಯಮಗಳನ್ನು ಗಮನಿಸಿ

Published : Oct 13, 2017, 10:08 PM ISTUpdated : Apr 11, 2018, 12:49 PM IST
ದೀಪಾವಳಿ ಪಟಾಕಿ ಹೊಡೆಯುವ ಮುನ್ನ ವಾಣಿಜ್ಯ ಮಂಡಳಿಯ ಈ ನಿಯಮಗಳನ್ನು ಗಮನಿಸಿ

ಸಾರಾಂಶ

ಸಂಭ್ರಮದಿಂದ ದೀಪಾವಳಿ ಹಬ್ಬ ಆಚರಿಸಲು ಸಿದ್ಧರಾಗಿದ್ದೀರಾ? ಹಾಗಾದ್ರೆ ಈ ಬಾರಿಯ ದೀಪಾವಳಿಯನ್ನು ಕೆಲವು ಕಟ್ಟುಪಾಡುವಿನಲ್ಲಿ ಆಚರಿಸಬೇಕಿದೆ. ಪಟಾಕಿ ಹೊಡೆಯುವುದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮದ ಹಿನ್ನೆಲೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೆಲವೊಂದು ನೀತಿ-ನಿಯಮ ಜಾರಿಗೆ ತಂದಿದೆ.

ಬೆಂಗಳೂರು (ಅ.13):  ಸಂಭ್ರಮದಿಂದ ದೀಪಾವಳಿ ಹಬ್ಬ ಆಚರಿಸಲು ಸಿದ್ಧರಾಗಿದ್ದೀರಾ? ಹಾಗಾದ್ರೆ ಈ ಬಾರಿಯ ದೀಪಾವಳಿಯನ್ನು ಕೆಲವು ಕಟ್ಟುಪಾಡುವಿನಲ್ಲಿ ಆಚರಿಸಬೇಕಿದೆ. ಪಟಾಕಿ ಹೊಡೆಯುವುದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮದ ಹಿನ್ನೆಲೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೆಲವೊಂದು ನೀತಿ-ನಿಯಮ ಜಾರಿಗೆ ತಂದಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮಗಳು

ನಿರ್ಜನ ಪ್ರದೇಶದಲ್ಲಿ ಪಟಾಕಿ ಹೊಡೆಯುವುದು

ಮಕ್ಕಳು ಪಟಾಕಿ ಹೊಡೆಯುವಾಗ ಎಚ್ಚರಿಕೆ ವಹಿಸುವುದು

ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆ ವರೆಗೆ ಪಟಾಕಿ ಹೊಡೆಯುವುದು ನಿಷೇಧ

125 ಡಿಸಿಬಲ್ ಗಿಂತ ಹೆಚ್ಚಿನ ಶಬ್ದದ ಪಟಾಕಿ ಬಳಸುವಂತಿಲ್ಲ

ರಾತ್ರಿ 10 ಗಂಟೆ ನಂತ್ರ ಧ್ವನಿ ವರ್ಧಕ ಬಳಸುವಂತಿಲ್ಲ

ಪರಿಸರ ಮಾಲಿನ್ಯ ಆಗದಂತೆ ಹಬ್ಬ ಆಚರಿಸುವುದು

ದೀಪದಿಂದ ದೀಪ ಬೆಳಗಿಸಿ ಬೆಳಕಿನ ಹಬ್ಬ ಆಚರಿಸಿ

ಪಟಾಕಿಯೊಡೆಯುದರಿಂದ ಅತಿ ಹೆಚ್ಚು ವಾಯು ಮಾಲಿನ್ಯ, ಶಬ್ದ ಮಾಲಿನ್ಯದ ಜತೆ ಬೆಂಕಿ ಅವಘಡಗಳು ಆಗುವುದು ಸಾಮಾನ್ಯವಾಗಿದೆ. ಹೀಗಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೆಲವೊಂದು ನಿಯಂತ್ರಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಈಗಾಗಲೇ ಕಟ್ಟು ನಿಟ್ಟಾಗಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ, ಬಿಬಿಎಂಪಿ ಅಧಿಕಾರಿಗಳಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದೆ. ಇದಲ್ಲದೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂತ್ತೋಲೆ ಹೊರಡಿಸಿದ್ದು, ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ.

ಪ್ರತಿ ವರ್ಷವೂ ಪಟಾಕಿ ಬೆಂಕಿ ಅವಘಡದಿಂದ ಮಕ್ಕಳು ಗಾಯ ಮಾಡಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಪಟಾಕಿ ಕೊಡುವಾಗ ಪೋಷಕರು ಎಚ್ಚರಿಕೆ ವಹಿಸಬೇಕಿದೆ. ಬೆಳಕಿನ ಹಬ್ಬವನ್ನು ದೀಪ ಅಚ್ಚುವ ಮೂಲಕ ಆಚರಿಸಿ. ಅದಷ್ಟು ನಿರ್ಜನ ಪ್ರದೇಶದಲ್ಲಿಯೇ ಪಟಾಕಿ ಹೊಡೆಯುವುದು ಉತ್ತಮ. ಇದಲ್ಲದೆ ತಡ ರಾತ್ರಿಯಲ್ಲಿ ಪಟಾಕಿ ಹೊಡೆಯದೆ, ಕಡಿಮೆ ಡಿಸಿಬಲ್ ಹೊಂದಿದ ಪಟಾಕಿ ಸಿಡಿಸಿ ಸಂಭ್ರಮಿಸಿ ಪರಿಸರ ಸಂರಕ್ಷಣೆ ಮಾಡಿ ಎಂಬುದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮನವಿಯಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನ 2ನೇ ಏರ್‌ಪೋರ್ಟ್‌, ಗುರುತಿಸಿರೋ ಈ 3 ಸ್ಥಳಗಳಲ್ಲಿ ಯಾವುದು ಬೆಸ್ಟ್? ಅಧ್ಯಯನಕ್ಕೆ ಟೆಂಡರ್ ಕರೆದ ಸರ್ಕಾರ!
ನವೋದಯ ಪರೀಕ್ಷೆಯಲ್ಲಿ ಅಕ್ರಮ ಆರೋಪ; ಬೀದರ್‌ನಲ್ಲಿ ಬಿಇಓಗೆ ವಿದ್ಯಾರ್ಥಿ ಪೋಷಕರಿಂದ ತರಾಟೆ