
ಬೆಂಗಳೂರು (ಅ. 26): ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಶುಕ್ರವಾರ ಲಂಡನ್ನ ಥೇಮ್ಸ್ ನದಿ ತೀರದಲ್ಲಿರುವ ಜಗಜ್ಯೋತಿ ಬಸವೇಶ್ವರ ಪ್ರತಿಮೆಗೆ ಗೌರವ ಸಲ್ಲಿಸಲಿದ್ದಾರೆ.
ಗುರುವಾರ ಬೆಂಗಳೂರಿನಿಂದ ಲಂಡನ್ನಿಗೆ ತೆರಳಿದ ಅವರನ್ನು ಅಲ್ಲಿನ ಲ್ಯಾಂಬೆತ್ನ ಮಾಜಿ ಮೇಯರ್ ಹಾಗೂ ಕನ್ನಡಿಗ ಡಾ.ನೀರಜ್ ಪಾಟೀಲ್ ಅವರು ಭೇಟಿ ಮಾಡಿ ಅಲ್ಲಿನ ಕನ್ನಡಿಗ ಒಕ್ಕೂಟಗಳ ಪರವಾಗಿ ಮತ್ತೊಮ್ಮೆ ಆಹ್ವಾನ ನೀಡಿದರು.
ಈ ಪ್ರತಿಮೆ ಸ್ಥಾಪನೆಯಾಗುವಲ್ಲಿ ನೀರಜ್ ಪಾಟೀಲ್ ಅವರ ಪಾತ್ರ ಪ್ರಮುಖವಾದದ್ದು. ಅವರ ಅವಿರತ ಪ್ರಯತ್ನದಿಂದಾಗಿಯೇ ಪ್ರತಿಮೆ ಸ್ಥಾಪನೆಗೊಂಡಿತ್ತು. ಹೀಗಾಗಿ, ದೇವೇಗೌಡರು ಶುಕ್ರವಾರ ಅಲ್ಲಿಗೆ ತೆರಳಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿನ ಕನ್ನಡಿಗರೊಂದಿಗೆ ಕೆಲ ಕಾಲ ಸಮಾಲೋಚನೆಯನ್ನೂ ನಡೆಸಲಿದ್ದಾರೆ. ಗುರುವಾರ ಲಂಡನ್ನಿನಲ್ಲಿ ನಡೆದ ಜಾಗತಿಕ ಸಾಧಕರ ಸಮಾವೇಶದಲ್ಲಿ ದೇವೇಗೌಡರು ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.