
ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅರ್ಪಿಸುವ ಹರಕೆ ಸೀರೆಗಳ ಮಾರಾಟದಿಂದಲೇ ದೇವಳಕ್ಕೆ ವರ್ಷಕ್ಕೆ ಸುಮಾರು 80 ರಿಂದ 1 ಕೋಟಿ ಆದಾಯ ಬರುತ್ತಿದೆ. ಈ ಬಗ್ಗೆ ಗುರುವಾರ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಮುಜರಾಯಿ ಇಲಾಖೆ ತಹಸೀಲ್ದಾರ್ ಯತಿರಾಜ್, ಈ ಹಿಂದೆ ತಿಂಗಳಿಗೆ ಒಮ್ಮೆ ಅಥವಾ ಕೆಲವು ತಿಂಗಳಿಗೆ ಒಮ್ಮೆ ಸೀರೆ ಮಾರಾಟ ಮಾಡಲಾಗುತ್ತಿತ್ತು.
ಆದರೆ ಎರಡು- ಮೂರು ವರ್ಷದಿಂದ ಪ್ರತಿದಿನ ಅಥವಾ ಎರಡು ದಿನಕ್ಕೆ ಒಮ್ಮೆ ಸೀರೆ ಮಾರಾಟ ಮಾಡಲಾಗುತ್ತಿದೆ ಎಂದರು. ದೇವಿಗೆ ಹರಕೆ ಹೊತ್ತ ಭಕ್ತರು 300 ರು. ಗಳಿಂದ ಹಿಡಿದು ಹತ್ತಾರು ಸಾವಿರ ರುಪಾಯಿ ಬೆಲೆ ಬಾಳುವ ರೇಷ್ಮೆ, ಜರಿ ಸೀರೆ ಮತ್ತು ಸಾಧಾರಣ ಸೀರೆಗಳನ್ನು ಅರ್ಪಿಸುತ್ತಾರೆ.
ಹೀಗೆ ಸಂಗ್ರಹವಾದ ಸೀರೆಯನ್ನು ಪ್ರತಿನಿತ್ಯ ಅಥವಾ ಎರಡು ದಿನಕ್ಕೆ ಒಮ್ಮೆ(ಸೀರೆ ಸಂಗ್ರಹವಾದಂತೆ) ಗರ್ಭ ಗುಡಿಯ ಹಿಂಭಾಗದ ಕೌಂಟರ್ನಲ್ಲಿ ಶೇ.25 ರಿಯಾಯಿತಿ ಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.