ಅಪಮೌಲ್ಯೀಕರಣವು ಪ್ರಸವ ವೇದನೆಯಿದ್ದಂತೆ: ವೆಂಕಯ್ಯ ನಾಯ್ಡು

Published : Nov 16, 2016, 03:19 PM ISTUpdated : Apr 11, 2018, 12:50 PM IST
ಅಪಮೌಲ್ಯೀಕರಣವು ಪ್ರಸವ ವೇದನೆಯಿದ್ದಂತೆ: ವೆಂಕಯ್ಯ ನಾಯ್ಡು

ಸಾರಾಂಶ

ಅಪಮೌಲ್ಯೀಕರಣವು ಪ್ರಸವವೇದನೆಯಿದ್ದಂತೆ. ಈ ತಾತ್ಕಾಲಿಕ ನೋವು, ಮುಂಬರುವ ದಿನಗಳಲ್ಲಿ ಪ್ರಯೋಜನಕಾರಿಯಾಗಲಿದೆ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವರಾಗಿರುವ ವೆಂಕಯ್ಯ ನಾಯ್ಡು ಹೇಳಿದ್ದಾರೆ.

ನವದೆಹಲಿ (ನ.16): ಇಂದು ಆರಂಭವಾದ ಚಳಿಗಾಲ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ನೋಟುಗಳ ಅಪಮೌಲ್ಯೀಕರಣವನ್ನು ಸಮರ್ಥಿಸಿಕೊಂಡಿದೆ.

ರಾಜ್ಯಸಭೆಯಲ್ಲಿ ನೋಟುಗಳ ಅಪಮೌಲ್ಯೀಕರಣ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಸರ್ಕಾರದ ಕ್ರಮದಿಂದ ಉಂಟಾಗಿರುವ  ಸಮಸ್ಯೆಯು ತಾತ್ಕಾಲಿಕವಾಗಿದ್ದು, ಮುಂದಿನ ದಿನಗಳಲ್ಲಿ ಜನರಿಗೆ ಅದರ ಪ್ರಯೋಜನ ಸಿಗಲಿದೆ ಎಂದು ಹೇಳಿದ್ದಾರೆ.

‘ಅಪಮೌಲ್ಯೀಕರಣವು ಪ್ರಸವವೇದನೆಯಿದ್ದಂತೆ. ಈ ತಾತ್ಕಾಲಿಕ ನೋವು, ಮುಂಬರುವ ದಿನಗಳಲ್ಲಿ ಪ್ರಯೋಜನಕಾರಿಯಾಗಲಿದೆ. ನೋಟು ನಿಷೇಧ ಕ್ರಮವು, ನಕಲಿ ನೋಟು ಮತ್ತು ಭಯೋತ್ಪಾದನೆಗೆ ಹಣಕಾಸು ನೆರವುಗಳಂಥ ಹಾವಳಿಗಳಿಗೆ ತಡೆಯೊಡ್ಡಲಿದೆ, ಎಂದು ನಾಯ್ಡು ಹೇಳಿದ್ದಾರೆ.

ಜನಾದೇಶಕ್ಕೆ ವಿರುದ್ಧವಾಗಿರುವ ಹೊಸ ರೀತಿಯ ಅಸಹಿಷ್ಣತೆಯೊಂದು ಹುಟ್ಟಿಕೊಂಡಿದೆ. ರಾಷ್ಟ್ರ-ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಸಂಘಟನೆಗಳಿಗೆ ಸರ್ಕಾರದ ಈ ಕ್ರಮದಿಂದ ತಳಮಳವುಂಟಾಗಿದೆ ಎಂದು ನಾಯ್ಡು ಹೇಳಿದ್ದಾರೆ.

ಕಪ್ಪುಹಣ, ದುರಾಸೆ ಹಾಗೂ ಸ್ವಜನ ಪಕ್ಷಪಾತಮಾಡಿ ಬೆಳೆದವರು ಈಗ ಸರ್ಕಾರವನ್ನು ದೂಷಿಸುತ್ತಿದ್ದಾರೆ. ಸರ್ಕಾರದ ಕ್ರಮವು ಕಪ್ಪುಹಣದ ವಿರುದ್ಧ ಸಾರಲಾಗಿರುವ ಸಮರವಾಗಿದೆ; ಪ್ರತಿಪಕ್ಷಗಳು ಈ ಪೈಕಿ ಒಂದನ್ನು ಬೆಂಬಲಿಸಬೇಕು, ಎಂದು ನಾಯ್ಡು ಪ್ರತಿ ವಾಗ್ದಾಳಿ ನಡೆಸಿದ್ದಾರೆ.

ಚಳಿಗಾಲ ಅಧಿವೇಶನದ ಮೊದಲನೇ ದಿನವಾದ ಇಂದು, ಪ್ರತಿಪಕ್ಷಗಳು ಸರ್ಕಾರದ ನೋಟು ಅಪಮೌಲ್ಯೀಕರಣ ಕ್ರಮದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ಅಪ್ಪ- ಅಮ್ಮನ ವಿಚ್ಚೇಧನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?