
ನವದೆಹಲಿ (ಫೆ.21): ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿಯ 10 ಮತ್ತು 12 ನೇ ಕ್ಲಾಸಿನ ಶೈಕ್ಷಣಿಕ ದಾಖಲೆಯನ್ನು ಪರಿಶೋಧನೆ ಮಾಡಲು ಸಿಬಿಎಸ್ ಇಗೆ ಕೇಂದ್ರ ಮಾಹಿತಿ ಆಯೋಗ ನೀಡಿದ್ದ ಸೂಚನೆಗೆ ದೆಹಲಿ ನ್ಯಾಯಾಲಯ ತಡೆ ನೀಡಿದೆ.
ಸ್ಮೃತಿ ಇರಾನಿಯವರ ಶೈಕ್ಷಣಿಕ ದಾಖಲೆಯನ್ನು ಬಹಿರಂಗಪಡಿಸುವಂತೆ ಸಿಬಿಎಸ್ಇಗೆ ಕೇಂದ್ರೀಯ ಮಾಹಿತಿ ಆಯೋಗ ನಿರ್ದೇಶಿಸಿತ್ತು. ಆದರೆ ಇದು ವೈಯಕ್ತಿಕ ಮಾಹಿತಿ ಎನ್ನುವ ಅಂಶವನ್ನು ಮುಂದಿಟ್ಟು ಸಿಬಿಎಸ್ಇ ದಾಖಲೆ ಬಹಿರಂಗಗೊಳಿಸಲು ನಿರಾಕರಿಸಿ ಇದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು.
1978 ರಲ್ಲಿ ಪಡೆದ ಪಡೆದ ಬಿಎ ಪದವಿ ದಾಖಲೆಯನ್ನು ಪರಿಶೀಲಿಸಲು ಅನುಮತಿ ನೀಡಬೇಕೆಂದು ದೆಹಲಿ ವಿವಿ ಅಧಿಕಾರಿಗಳಿಗೂ ಸಿಐಸಿ ಸೂಚಿಸಿತ್ತು.
ಇಂದು ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ತನಿಖೆಗೆ ತಡೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.