ಸಿಬಿಐಯಿಂದ ಮೂವರು ಕೇಂದ್ರೀಯ ಅಬಕಾರಿ ಅಧಿಕಾರಿಗಳ ಬಂಧನ

Published : Feb 21, 2017, 12:22 PM ISTUpdated : Apr 11, 2018, 12:47 PM IST
ಸಿಬಿಐಯಿಂದ ಮೂವರು ಕೇಂದ್ರೀಯ ಅಬಕಾರಿ ಅಧಿಕಾರಿಗಳ ಬಂಧನ

ಸಾರಾಂಶ

ದೂರುದಾರರಿಂದ 3 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟು ಸ್ವೀಕರಿಸಿದ್ದಕ್ಕಾಗಿ ಇಬ್ಬರು ಸೂಪರಿಟೆಂಡೆಂಟ್ ಮತ್ತು ಕೇಂದ್ರ ಅಬಕಾರಿ ಇಲಾಖೆಯ ಒಬ್ಬ ಇನ್ಸ್ ಪೆಕ್ಟರನ್ನು ಸಿಬಿಐ ಹರ್ಯಾಣದ ಸೋನೆಪತ್ ನಲ್ಲಿ ಇಂದು ಬಂಧಿಸಿದೆ.

ನವದೆಹಲಿ (ಫೆ.21): ದೂರುದಾರರಿಂದ 3 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟು ಸ್ವೀಕರಿಸಿದ್ದಕ್ಕಾಗಿ ಇಬ್ಬರು ಸೂಪರಿಟೆಂಡೆಂಟ್ ಮತ್ತು ಕೇಂದ್ರ ಅಬಕಾರಿ ಇಲಾಖೆಯ ಒಬ್ಬ ಇನ್ಸ್ ಪೆಕ್ಟರನ್ನು ಸಿಬಿಐ ಹರ್ಯಾಣದ ಸೋನೆಪತ್ ನಲ್ಲಿ ಇಂದು ಬಂಧಿಸಿದೆ.

ದೂರುದಾರರ ಕಂಪನಿಗೆ ಅಧಿಕಾರಿಗಳು ಫೆ. 13 ರಂದು ಲೆಕ್ಕಪತ್ರ ಪರಿಶೋಧನೆಗೆ ಭೇಟಿ ನೀಡಿದ್ದರು. ಆಗ ಡಬ್ಬಲ್ ಬಿಲ್ಲಿಂಗ್, ಅಬಕಾರಿ ತೆರಿಗೆ ವಂಚನೆ ಇತ್ಯಾದಿ ವಿಚಾರಗಳ ಬಗ್ಗೆ ಖ್ಯಾತೆ ತೆಗೆದಿದ್ದಾರೆ. ಅದಕ್ಕಾಗಿ 25-30 ಲಕ್ಷ ದಂಡವನ್ನು ಕಂಪನಿಗೆ ಹೇರಲಾಗುತ್ತದೆ ಎಂದು ಹೆದರಿಸಿದ್ದರು ಎನ್ನಲಾಗಿದೆ.

ತೆರಿಗೆಯನ್ನು ಕಡಿಮೆ ಮಾಡಬೇಕೆಂದರೆ 10 ಲಕ್ಷ ಲಂಚವನ್ನು ಕೊಡಿ ಎಂದು ಅಧಿಕಾರಿಗಳು ಬೇಡಿಕೆಯಿಟ್ಟಿದ್ದಾರೆ. ನನ್ನ ವಿನಂತಿ ಮೇರೆಗೆ 9 ಲಕ್ಷಕ್ಕೆ ಒಪ್ಪಿಕೊಂಡಿದ್ದಾರೆ. ಮೊದಲ ಕಂತಿನಲ್ಲಿ 3 ಲಕ್ಷ ತೆಗೆದುಕೊಳ್ಳುವುದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ದೂರುದಾರರು ಹೇಳಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲಿಯೋನಲ್ ಮೆಸ್ಸಿಗೆ ಪಾಸ್ ವೈಡ್ ಪಾಸ್ ಕೊಟ್ಟು ವೈರಲ್ ಆದ ಸಿಎಂ ರೇವಂತ್ ರೆಡ್ಡಿ
ಕುಂಟುನೆಪ ಹೇಳಂಗಿಲ್ಲ, ಈ ದೇಶಗಳ ನಾಗರಿಕರಿಗೆ ಮಿಲಿಟರಿ ಸೇವೆ ಕಡ್ಡಾಯ! ಭಾರತದಲ್ಲಿ ಇದು ಜಾರಿಯಾದ್ರೆ?