ಚುನಾವಣೆ ಮೇಲೆ ಕಣ್ಣು: ಆಟೋ ಚಾಲಕರಿಗೆ ಸಿಎಂ ಭರ್ಜರಿ ಗಿಫ್ಟ್!

Published : Aug 14, 2019, 11:54 AM IST
ಚುನಾವಣೆ ಮೇಲೆ ಕಣ್ಣು: ಆಟೋ ಚಾಲಕರಿಗೆ ಸಿಎಂ ಭರ್ಜರಿ ಗಿಫ್ಟ್!

ಸಾರಾಂಶ

ಮುಂದಿನ ವರ್ಷ ನಡೆ​ಯುವ ವಿಧಾ​ನ​ಸಭಾ ಚುನಾ​ವ​ಣೆಗೆ ಭರ್ಜರಿ ತಯಾರಿ ನಡೆ​ಸು​ತ್ತಿ​ರುವ ಸಿಎಂ| ಚುನಾವಣೆ ಮೇಲೆ ಕಣ್ಣು: ಆಟೋ ಚಾಲಕರಿಗೆ ಸಿಎಂ ಭರ್ಜರಿ ಗಿಫ್ಟ್!| 

ನವ​ದೆ​ಹ​ಲಿ[ಆ.14]: ಮುಂದಿನ ವರ್ಷ ನಡೆ​ಯುವ ವಿಧಾ​ನ​ಸಭಾ ಚುನಾ​ವ​ಣೆಗೆ ಭರ್ಜರಿ ತಯಾರಿ ನಡೆ​ಸು​ತ್ತಿ​ರುವ ದೆಹಲಿ ಮುಖ್ಯಮಂತ್ರಿ ಅರ​ವಿಂದ ಕೇಜ್ರಿ​ವಾಲ್‌ ಜನ​ಪ್ರಿಯ ಯೋಜ​ನೆ​ಗಳ ಮೂಲಕ ಅಧಿ​ಕಾರ ಉಳಿ​ಸಿ​ಕೊ​ಳ್ಳುವ ಕಸ​ರತ್ತು ಮುಂದುವರೆಸಿದ್ದಾರೆ.

ಇತ್ತೀಚೆಗಷ್ಟೇ ಮಹಿ​ಳೆ​ಯ​ರಿಗೆ ಬಸ್‌ ಹಾಗೂ ಮೆಟ್ರೋ​ಗ​ಳಲ್ಲಿ ಉಚಿತ ಪ್ರಯಾಣ, ಜನಸಾಮಾನ್ಯರಿಗೆ 200 ಯುನಿಟ್‌ವರೆಗೆ ಉಚಿತ ವಿದ್ಯುತ್‌, ಉಚಿತ ವೈಫೈ ಸೇವೆ ಘೋಷಿಸಿದ್ದ ಕೇಜ್ರಿ​ವಾಲ್‌, ಈಗ ಆಟೋ ಚಾಲ​ಕ​ರನ್ನೂ ಸೆಳೆ​ಯಲು ಮುಂದಾ​ಗಿದ್ದು, ಆಟೋ ಚಾಲ​ಕ​ರಿಗೆ ವಿಧಿ​ಸ​ಲಾ​ಗುತ್ತಿದ್ದ ವಿವಿಧ ಕರ​ ಹಾಗೂ ದಂಡ​ಗ​ಳಲ್ಲಿ ವಿನಾ​ಯಿತಿ ಘೋಷಿ​ಸಿ​ದ್ದಾರೆ. ಆಟೋಗಳಿಗೆ ವಿಧಿಸುತ್ತಿದ್ದ 600 ರು. ಫಿಟ್ನೆಸ್‌ ಟೆಸ್ಟ್‌ ಶುಲ್ಕ​ ಹಾಗೂ 100 ರು. ಜಿಪಿ​ಎಸ್‌ ಶುಲ್ಕ ಸಂಪೂ​ರ್ಣ​ವಾಗಿ ರದ್ದು ಮಾಡ​ಲಾ​ಗಿದೆ.

ರಿಕ್ಷಾ​ ನೋಂದಣಿ ಹಾಗೂ ಮರು ನೋಂದಣಿ ಶುಲ್ಕ​ವ​ನ್ನು 1000 ರು.ನಿಂದ 300 ರು.ಗೆ ಇಳಿ​ಸ​ಲಾ​ಗಿ​ದೆ. ಫಿಟ್ನೆಸ್‌ ಟೆಸ್ಟ್‌ ವಿಳಂಬ​ವಾ​ದರೆ 1000 ರು. ಹಾಗೂ ದಿನಕ್ಕೆ 50 ರು.ನಂತೆ ವಿಳಂಬ​ ಶುಲ್ಕ ಪಾವತಿ ಮಾಡ​ಬೇ​ಕಿತ್ತು. ಅದರೆ ಅದನ್ನು 300 ಹಾಗೂ 20 ರು.ಗೆ ಕಡಿ​ತ​ಗೊ​ಳಿ​ಸ​ಲಾ​ಗಿದೆ. ನೊಂದಣಿ ಪತ್ರದ ನಕಲು ಪ್ರತಿ ಹಾಗೂ ಮಾಲಿ​ಕತ್ವ ಬದ​ಲಾ​ವ​ಣೆಗೆ ಚಾಲ್ತಿ​ಯ​ಲ್ಲಿದ್ದ 500 ರು.ರು ಬದ​ಲಿಗೆ 150 ರು. ನಿಗದಿ ಪಡಿ​ಸ​ಲಾ​ಗಿದೆ. ಪರ್ಮಿಟ್‌ ನವೀ​ಕ​ರ​ಣ ಶುಲ್ಕವನ್ನು 1000 ರು.ನಿಂದ 500 ರು.ಗೆ ಕಡಿ​ತ​ಗೊ​ಳಿಸ​ಲಾ​ಗಿದೆ.

ಕೇಜ್ರಿ ಸರ್ಕಾ​ರದ ಈ ನೀತಿ​ಯಿಂದ ರಾಜ​ಧಾ​ನಿಯ 90 ಸಾವಿರ ಆಟೋ ಚಾಲ​ಕ​ರಿಗೆ ಉಪ​ಯೋ​ಗ​ವಾ​ಗ​ಲಿದ್ದು, ದೆಹಲಿ ಅಟೋ ರಿಕ್ಷಾ ಸಂಘ ಸರ್ಕಾರದ ಈ ನಿರ್ಧಾ​ರ​ವನ್ನು ಸ್ವಾಗ​ತಿ​ಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು