
ನವದೆಹಲಿ (ಮೇ. 09): ಸೇನಾ ಸಿಬ್ಬಂದಿ ಅಥವಾ ಗಣ್ಯವ್ಯಕ್ತಿಗಳು ಮೃತಪಟ್ಟ ವೇಳೆ ತ್ರಿವರ್ಣ ಧ್ವಜ ಹೊದೆಸಿ ಅಂತ್ಯಕ್ರಿಯೆ ನಡೆಸುವ ಪರಿಪಾಠವಿದೆ. ಆದರೆ, ದೆಹಲಿ ಪೊಲೀಸರು ಮೃತ ನವಿಲೊಂದಕ್ಕೆ ತ್ರಿವರ್ಣ ಧ್ವಜ ಹೊದೆಸಿ ಅಂತ್ಯ ಕ್ರಿಯೆ ನೆರವೇರಿಸಿರುವುದು ವಿವಾದಕ್ಕೀಡಾಗಿದೆ.
ದೆಹಲಿ ಹೈಕೋರ್ಟ್ನ ಹೊರಗಡೆ ರಸ್ತೆಯೊಂದರಲ್ಲಿ ಅಪಘಾತಕ್ಕೆ ಒಳಗಾಗಿದ್ದ ನವಿಲನ್ನು ಪೊಲೀಸರು ರಕ್ಷಿಸಿದ್ದರು.ಆದರೆ, ಗಾಯದಿಂದಾಗಿ ನವಿಲು ಶುಕ್ರವಾರ ಸಾವನ್ನಪ್ಪಿತ್ತು. ನವಿಲು ಭಾರತದ ರಾಷ್ಟ್ರೀಯ ಪಕ್ಷಿಯಾದ ಕಾರಣ ನಿಯಮಾವಳಿಯಂತೆ ಪೊಲೀಸರು ಸರ್ಕಾರಿ ಗೌರವಗಳೊಂದಿಗೆ ತ್ರಿವರ್ಣ ಧ್ವಜ ಹೊದೆಸಿ ಮರದ ಪೆಟ್ಟಿಗೆಯಲ್ಲಿಟ್ಟು ಅಂತ್ಯಕ್ರಿಯೆ ನೆರವೇರಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.