ಸಿಎಂ ಜೊತೆ ದೆಹಲಿಗೆ ಹೋಗದ ಕಾರಣ ಬಿಚ್ಚಿಟ್ಟ ಡಿಸಿಎಂ

Published : Jul 18, 2018, 03:28 PM IST
ಸಿಎಂ ಜೊತೆ ದೆಹಲಿಗೆ ಹೋಗದ ಕಾರಣ ಬಿಚ್ಚಿಟ್ಟ ಡಿಸಿಎಂ

ಸಾರಾಂಶ

ಸಹೋದರನ ಅನಾರೋಗ್ಯದ ಕಾರಣ ಹೋಗಲಾಗಿಲ್ಲ ಎಂದು ಸ್ಪಷ್ಟನೆ ಬಿಜೆಪಿಯವರು ಐಫೋನ್ ಬಿಟ್ಟು ಬೇರೆ ವಿಚಾರದ ಬಗ್ಗೆ ಚರ್ಚಿಸಲಿ ಎಂದ ಡಿಸಿಎಂ

ಬೆಂಗಳೂರು[ಜು.18]: ನನ್ನ ಸಹೋದರನ ಆರೋಗ್ಯ ಪರಿಸ್ಥಿತಿ ಗಂಭೀರವಾಗಿರುವ ಕಾರಣ ದೆಹಲಿಗೆ ಹೋಗಲು ಸಾಧ್ಯವಾಗಿಲ್ಲ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದರಿಗೆ ಐ ಫೋನ್ ಕೊಟ್ಟ ವಿಚಾರ ನನಗೆ ಗೊತ್ತಿಲ್ಲ. ಸರ್ಕಾರದಿಂದ ಕೊಟ್ಟಿದ್ದಾರೋ ಅಥವಾ ಡಿಕೆಶಿ ಸ್ವಂತ ಖರ್ಚಿನಲ್ಲಿ ಕೊಟ್ಟಿದ್ದಾರೋ ಗೊತ್ತಿಲ್ಲ.ಅದೇನೂ ಚರ್ಚೆ ಮಾಡುವಂತಹಾ ಗಂಭೀರ ವಿಚಾರವಲ್ಲ. ಕಾವೇರಿ ವಿವಾದದಂತಹ ಗಂಭೀರ ವಿಚಾರಗಳಿವೆ. ಬಿಜೆಪಿಯವರು ಅಂತಹವುಗಳ ಬಗ್ಗೆ ಚರ್ಚೆ ಮಾಡಲಿ. ಅದರಿಂದ ರಾಜ್ಯಕ್ಕೂ ಒಳಿತಾಗುತ್ತೆ ಎಂದರು.

ಎಂ ಬಿ ಪಾಟೀಲ್ ಗೆ ಸೈಕಲ್ ರವಿ ನಂಟಿರುವ ಬಗ್ಗೆ ಮಾತನಾಡಿದ ಡಿಸಿಎಂ,ಇನ್ನೂ ಕೇಸ್ ತನಿಖೆ ಹಂತದಲ್ಲಿ ಇದೆ. ಎಂ.ಬಿ.ಪಾಟೀಲ್'ಗೆ ಸೈಕಲ್ ರವಿಗೂ ನಂಟಿನ ವಿಚಾರವೇ ಇಲ್ಲ ಅಂತಾ ಅಧಿಕಾರಿಗಳು ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಅವರು ಮತ್ತವರ ತಂಡ ಹರಕೆ ಹೊತ್ತು ಕೊಂಡಿರುವ ಸಾಧ್ಯತೆಯ ಕಾರಣ ಜೈಪುರ ಪ್ರವಾಸಕ್ಕೆ ತೆರಳಲಿದ್ದಾರೆ. ಇದನ್ನು ಬಂಡಾಯ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ವರದಿ ಕೇಳಿದ ಬಗ್ಗೆ ನನಗೇನೂ ಗೊತ್ತಿಲ್ಲ. ಇದು ಕೆಪಿಸಿಸಿ ಅದ್ಯಕ್ಷರಿಗೆ ಸಂಬಂಧಿಸಿದ ವಿಷಯ. ಬಹುಶಃ ಹೈಕಮಾಂಡ್ ದಿನೇಶ್ ಅವರ ಬಳಿ ವರದಿ ಕೇಳಿರಬಹುದು ಎಂದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Karnataka News Live: ತಮ್ಮನ್ನು ಬಿಜೆಪಿ ಉಚ್ಛಾಟನೆ ಮಾಡಿದ್ಯಾಕೆ? ರಹಸ್ಯ ಬಿಚ್ಚಿಟ್ಟ ಶಾಸಕ ಯತ್ನಾಳ್
ಮತಚೋರಿ ಬಗ್ಗೆ ದಿಲ್ಲೀಲಿ ಕೈ ನಾಯಕರ ರಣಕಹಳೆ: ಬಿಜೆಪಿ ವಿರುದ್ಧ ಖರ್ಗೆ, ರಾಗಾ, ಪ್ರಿಯಾಂಕಾ ಗುಡುಗು