ಪರಪ್ಪನ ಅಗ್ರಹಾರಕ್ಕಾದರೂ ಕಳಿಸಲಿ, ಸಿಬಿಐಗಾದರೂ ಕಳಿಸಲಿ, ನಾನು ಯಾವುದಕ್ಕೂ ಜಗ್ಗಲ್ಲ; ’ಪವರ್’ ಫುಲ್ ಉತ್ತರ

Published : Feb 15, 2018, 10:55 AM ISTUpdated : Apr 11, 2018, 01:06 PM IST
ಪರಪ್ಪನ ಅಗ್ರಹಾರಕ್ಕಾದರೂ ಕಳಿಸಲಿ, ಸಿಬಿಐಗಾದರೂ ಕಳಿಸಲಿ,  ನಾನು ಯಾವುದಕ್ಕೂ ಜಗ್ಗಲ್ಲ; ’ಪವರ್’ ಫುಲ್ ಉತ್ತರ

ಸಾರಾಂಶ

ಡಿಕೆಶಿ ಮೇಲೆ ಐಟಿ ಎಫ್’ಐಆರ್ ತೂಗುಗತ್ತಿ ತೂಗುತ್ತಿದ್ದು ಈ ಬಗ್ಗೆ ಖುದ್ದು ಶಿವಕುಮಾರ್ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.  

ಬೆಂಗಳೂರು (ಫೆ.16): ಡಿಕೆಶಿ ಮೇಲೆ ಐಟಿ ಎಫ್’ಐಆರ್ ತೂಗುಗತ್ತಿ ತೂಗುತ್ತಿದ್ದು ಈ ಬಗ್ಗೆ ಖುದ್ದು ಶಿವಕುಮಾರ್ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.  

ಹಳ್ಳಿಯಿಂದ ಬಂದ್ರೂ ಕಿವಿ ಮೇಲೆ ಹೂ ಇಟ್ಟುಕೊಂಡು ಬಂದಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.  ಹಾಳೆ ಹರಿದಿರುವ ಬಗ್ಗೆ ಸ್ಪಷ್ಟನೆ ನೀಡಿದ್ದು, ನನಗೆ ಯಾವುದೇ ನೋಟಿಸ್​ ಬಂದಿಲ್ಲ.   ಆದಾಯ ತೆರಿಗೆ ಇಲಾಖೆಯ ವರದಿ ಕೊಡಲು ಅವಕಾಶಗಳಿವೆ.  ನಾವು ಯಾವುದೇ ದಾಖಲೆ ಬಿಡುಗಡೆ ಮಾಡಿಲ್ಲ.  ಅವರು ಯಾವುದೇ ನೋಟಿಸ್​ ನೀಡಿಲ್ಲ ಎಂದು ಡಿಕೆಶಿ ಸ್ಪಷ್ಟನೆ ನೀಡಿದ್ದಾರೆ. 
ಜನಾಶೀರ್ವಾದ ಯಾತ್ರೆ ವೇಳೆ ಸುದ್ದಿ ಬರುತ್ತಿರುವುದರ ಹಿಂದೆ ರಾಜಕೀಯ ಉದ್ದೇಶವಿದೆ.  ಎಫ್’​ಐಆರ್​ ಹಿಂದೆ ರಾಜಕೀಯ ಉದ್ದೇಶವಿದೆ ಎಂದಿದ್ದಾರೆ. 
ನಾನು ಚೀಟಿ ಹರಿದು ಹಾಕಿದ್ದಕ್ಕೆ ಸಾಕ್ಷಿ ಇದೆಯಾ? ನಾನು ಚೀಟಿ ಹರಿದಿದ್ದು ಬಿಜೆಪಿ ನಾಯಕರಿಗೆ ಹೇಗೆ ತಿಳಿಯಿತು? ನೋಟಿಸ್​ ಬಂದರೆ ಕಾನೂನು ಮೂಲಕವೇ ಉತ್ತರ ನೀಡುತ್ತೇನೆ.  ಕಾನೂನು ಚೌಕಟ್ಟಿನ ಮೂಲಕವೇ ವ್ಯವಹರಿಸುತ್ತಿದ್ದೇನೆ. 
ಪರಪ್ಪನ ಅಗ್ರಹಾರಕ್ಕಾದರೂ ಕಳಿಸಲಿ, ಸಿಬಿಐಗಾದರೂ ಕಳಿಸಲಿ.  ನಾನು ಯಾವುದಕ್ಕೂ ಹೆದರುವ ಮನುಷ್ಯನಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.  ಸತ್ಯ, ನ್ಯಾಯ ಧರ್ಮ ಬಿಟ್ಟು ರಾಜಕಾರಣ ಮಾಡಿಲ್ಲ. ನನ್ನನ್ನು ರಕ್ಷಿಸುವ ಶಕ್ತಿ ಕಾನೂನಿಗಿದೆ.  ಚುನಾವಣೆಗೆ ಸ್ಪರ್ಧಿಸದಂತೆ ತಡೆಯುವ ತಂತ್ರ ನಡೆಯುತ್ತಿವೆ ಎಂದಿದ್ದಾರೆ. 

ಐಟಿ ದಾಳಿ ನಡೆದು 7 ತಿಂಗಳ ನಂತರ ಕೇಸ್ ದಾಖಲಿಸುವ ಉದ್ದೇಶವೇನು? ನಾನು ಚೀಟಿ ಹರಿದಿದ್ದರೆ ಅಂದೇ ನನ್ನ ಮೇಲೆ ಕೇಸ್ ದಾಖಲಿಸಬೇಕಿತ್ತು.  ನಾನು ಚೀಟಿ ಹರಿದ ಬಗ್ಗೆ ತಕ್ಷಣಕ್ಕೆ ಕೇಂದ್ರ ಸಚಿವರಿಗೆ ಹೇಗೆ ಮಾಹಿತಿ ಸಿಕ್ತು? ನನ್ನನ್ನು ಎಲೆಕ್ಷನ್​ಗೆ ಸ್ಪರ್ಧಿಸದಂತೆ ತಡೆಯುವ ಹುನ್ನಾರ ನಡೆಯುತ್ತಿದೆ. ಎಲೆಕ್ಷನ್​ಗೆ ಸ್ಪರ್ಧಿಸದಂತೆ ನನ್ನನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ.  40 ವರ್ಷದಿಂದ ರಾಜಕೀಯ ಮಾಡುತ್ತಿದ್ದೇನೆ. 29ನೇ ವಯಸ್ಸಿಗೆ ಮಂತ್ರಿಯಾದವನು ಎಂದಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಿಳೆ ಬಲಿ ಪಡೆದ ಚಿರತೆ ಕೊನೆಗೂ ಸೆರೆ, ದಾಳಿ ಮಾಡಿದ ಅದೇ ಸ್ಥಳದಲ್ಲೇ ಕಾರ್ಯಾಚರಣೆ
ಎಚ್‌ಎಎಲ್‌ ಸ್ಥಾಪನಾ ದಿನ: ಭಾರತದ ಏರೋಸ್ಪೇಸ್‌ ಸಾಧನೆಯ 86 ವರ್ಷಗಳ ಸಂಭ್ರಮಾಚರಣೆ