ನೋಟು ನಿಷೇಧ: ಹು-ಧಾ ಪಾಲಿಕೆಗೆ ತೆರಿಗೆ ಮಹೋತ್ಸವ

Published : Nov 15, 2016, 10:37 AM ISTUpdated : Apr 11, 2018, 12:56 PM IST
ನೋಟು ನಿಷೇಧ: ಹು-ಧಾ ಪಾಲಿಕೆಗೆ ತೆರಿಗೆ ಮಹೋತ್ಸವ

ಸಾರಾಂಶ

ಹುಬ್ಬಳ್ಳಿ-ಧಾರವಾಡ ಒನ್ ಕೇಂದ್ರದಲ್ಲಿ ರೂ.2,32,20,682 ಹಾಗೂ ವಿಶೇಷವಾಗಿ ತೆರೆಯಲಾಗಿದ್ದ ಕೌಂಟರ್’ಗಳಲ್ಲಿ ರೂ.94,33,593 ಕರ ಸಂಗ್ರಹವಾಗಿದೆ.

ಹುಬ್ಬಳ್ಳಿ (ನ.15): ಪಾಲಿಕೆ ಅಧಿಕಾರಿಗಳು ಆಸ್ತಿ ತೆರಿಗೆ ಸೇರಿದಂತೆ ಇತರೆ ತೆರಿಗೆ ಕಟ್ಟಿ ಎಂದು ಪರಿ ಪರಿಯಾಗಿ ಬೇಡಿಕೊಂಡರೂ ಬೆಲೆಕೊಡದ ತೆರಿಗೆದಾರರು ಇದೀಗ ಮೋದಿ ಕೊಟ್ಟ ಶಾಕ್’ಗೆ ಓಡೋಡಿ ಬಂದು ತೆರಿಗೆ ಪಾವತಿಗೆ ಮುಂದಾಗಿದ್ದಾರೆ.

ಹಳೆಯ ನೋಟುಗಳನ್ನು ರದ್ದು ಮಾಡಿದ ಬೆನ್ನಲ್ಲೆ ಎರಡೇ ದಿನದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಕೋಟ್ಯಾಂತರ ರೂಪಾಯಿ ಕರ ವಸೂಲಿಯಾಗಿದೆ.

ಸಾರ್ವಜನಿಕರು ಕೋಟ್ಯಾಂತರ ರೂಪಾಯಿಗಳ ಕರವನ್ನು ಪಾವತಿ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಮಹಾನಗರ ಪಾಲಿಕೆ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಹಳೇಯ ಐನೂರು ಮತ್ತು ಸಾವಿರ ರೂಪಾಯಿ ನೋಟುಗಳಲ್ಲಿ ತೆರಿಗೆ ಕಟ್ಟಬಹುದು ಎಂದು ಹೇಳಿದ್ದರು.

ಹೀಗಾಗಿ ತೆರಿಗೆ ಬಾಕಿಯಿರುವವರು ಎರಡೇ ದಿನಗಳಲ್ಲಿ ನಾಲ್ಕು ಕೋಟಿ ರೂಪಾಯಿಗಳ ತೆರಿಗೆ ಕಟ್ಟಿದ್ದಾರೆ. ಹುಬ್ಬಳ್ಳಿ-ಧಾರವಾಡ ಒನ್ ಕೇಂದ್ರದಲ್ಲಿ ರೂ.2,32,20,682 ಹಾಗೂ ವಿಶೇಷವಾಗಿ ತೆರೆಯಲಾಗಿದ್ದ ಕೌಂಟರ್’ಗಳಲ್ಲಿ ರೂ.94,33,593 ಕರ ಸಂಗ್ರಹವಾಗಿದೆ.

ಇದರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಬಾಕಿ ಉಳಿಸಿಕೊಂಡಿದ್ದ ಕರವನ್ನು ಸಾರ್ವಜನಿಕರು ಮಹಾನಗರ ಪಾಲಿಕೆಗೆ ಪಾವತಿಸಿದ್ದಾರೆ‌. ಕರ ತುಂಬುವ ಕುರಿತಂತೆ ವಷ೯ವಿಡಿ ಜಾಗೃತಿ ಮೂಡಿಸಿದರೂ ತಲೆ ಕೆಡಿಸಿಕೊಳ್ಳದ ಸಾರ್ವಜನಿಕರು ಕೊನೆಗೂ ಹಳೆಯ ನೋಟುಗಳಲ್ಲಿ ಬಾಕಿ ಉಳಿಸಿಕೊಂಡಿದ್ದ ಕರವನ್ನು ತುಂಬಿದ್ದಾರೆ‌‌.

ಹಳೆಯ ನೋಟುಗಳಲ್ಲಿ ಕರವನ್ನು ತುಂಬಲು ನಿನ್ನೆಯವರೆಗೆ ಅವಕಾಶ ನೀಡಲಾಗಿತ್ತು ಆದರೆ ನವೆಂಬರ್ 24ರವರೆಗೆ ಅವಧಿಯನ್ನು ಪಾಲಿಕೆ ಆಯುಕ್ತರು ವಿಸ್ತರಣೆ ಮಾಡಿದ್ದಾರೆ‌.

(ಸಾಂದರ್ಭಿಕ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ಅಪ್ಪ- ಅಮ್ಮನ ವಿಚ್ಚೇಧನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?