
ಪಾಟ್ನಾ(ನ.15): 70 ವರ್ಷಗಳ ಭ್ರಷ್ಟಚಾರವನ್ನು ಸ್ವಚ್ಛಗೊಳಿಸಲು 50 ದಿನವಾದರೂ ಬೇಡವೇ. ಕಪ್ಪುಹಣಕ್ಕೆ ಕಡಿವಾಣ ಹಾಕಲು ನನಗೆ 50 ದಿನಗಳ ಕಾಲಾವಕಾಶವನ್ನು ಕೊಡಿ ಎಂದು ಗೋವಾದಲ್ಲಿ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್. ಮೋದಿಯವರೇ ನೀವು ನಿಗದಿತ 50 ದಿನಗಳ ಸಮಯವನ್ನು ಕೇಳುತ್ತಿದ್ದೀರಿ. ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಯ ಖಾತೆಗೂ ರೂಪಾಯಿ15 ಲಕ್ಷ ಹಣವನ್ನು ಠೇವಣಿ ಮಾಡುತ್ತೇನೆಂದು ಈ ಹಿಂದೆ ಚುನಾವಣೆ ವೇಳೆಯಲ್ಲಿ ಭರವಸೆಯನ್ನು ನೀಡಿದ್ದೀರಿ. ಇದೀಗ 50 ದಿನಗಳ ಕಾಲಾವಕಾಶವನ್ನು ಕೇಳುತ್ತಿದ್ದೀರಿ. 50 ದಿನ ಕಳೆದ ಬಳಿಕ ಪ್ರತಿಯೊಬ್ಬ ಪ್ರಜೆಯ ಖಾತೆಗೆ 15 ಲಕ್ಷ ರೂಪಾಯಿ ಠೇವಣಿಯಾಗುತ್ತದೆಯೇ? ಎಂದು ಮೋದಿಗೆ ಲಾಲೂ ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.