
ಮುಂಬೈ[ಜು.10]: 19 ಜನರನ್ನು ಬಲಿ ಪಡೆದ ಇತ್ತೀಚಿನ ರತ್ನಗಿರಿಯ ಡ್ಯಾಮ್ ಒಡೆದ ಘಟನೆಗೆ, ಏಡಿಗಳೇ ಕಾರಣ ಎಂದಿದ್ದ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ತಾನಾಜಿ ಸಾವಂತ್ ವಿರುದ್ಧ ಎನ್ಸಿಪಿ ಕಾರ್ಯಕರ್ತರು ಮಂಗಳವಾರ ಏಡಿ ಪ್ರತಿಭಟನೆ ನಡೆಸಿದರು.
ನೂರಾರು ಜೀವಂತ ಏಡಿಗಳನ್ನೇ ಹಿಡಿದು ಚೀಲ, ಬಾಕ್ಸ್ಗಳಲ್ಲಿ ತಂದು ಸಾವಂತ್ ಅವರ ಮನೆಯ ಎದುರು ಸುರಿದು ಗಮನ ಸೆಳೆದರು. ಇತ್ತೀಚೆಗೆ ತಿವಾರಿ ಮಿನಿ ಡ್ಯಾಂ ಒಡೆದು ಏಕಾಏಕಿ ನೀರು ಹರಿದ ಪರಿಣಾಮ 19 ಮಂದಿ ಸಾವಿಗೀಡಾಗಿದ್ದರು.
ಡ್ಯಾಂ ಪರಿಶೀಲನೆಗೆ ಬಂದ ಸಚಿವ ಸಾವಂತ್, ಏಡಿಗಳೂ ಇರುವುದೇ ಡ್ಯಾಂ ಒಡೆಯಲು ಕಾರಣ ಎಂದು ಹೇಳಿಕೆ ನೀಡಿದ್ದರು. ಸಾವಂತ್ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.