ರೈತರಿಗೆ ಪರಿಹಾರ ನೀಡದ ರೈಲ್ವೆ ಇಲಾಖೆ; ರೈಲನ್ನೇ ಜಪ್ತಿ ಮಾಡಿದ ಕೋರ್ಟ್!

Published : Oct 24, 2016, 08:42 AM ISTUpdated : Apr 11, 2018, 12:55 PM IST
ರೈತರಿಗೆ ಪರಿಹಾರ ನೀಡದ ರೈಲ್ವೆ ಇಲಾಖೆ; ರೈಲನ್ನೇ ಜಪ್ತಿ ಮಾಡಿದ ಕೋರ್ಟ್!

ಸಾರಾಂಶ

ಹರಿಹರ-ಕೊಟ್ಟೂರು ರೈಲ್ವೆ ಮಾರ್ಗಕ್ಕೆ ರೈತರು  ಭೂಮಿ ನೀಡಿದ್ದು, ರೈಲ್ವೆ ಇಲಾಖೆ ರೈತರಿಗೆ 37 ಲಕ್ಷ ರೂಪಾಯಿ ನೀಡಬೇಕಿತ್ತು. ಆದರೆ ರೈಲ್ವೆ ಇಲಾಖೆ ಅಧಿಕಾರಿಗಳು ರೈತರಿಗೆ ಪರಿಹಾರ ಹಣ ಪಾವತಿಸಲಿರಲಿಲ್ಲ.

ದಾವಣಗೆರೆ (ಅ.24): ರೈತರಿಗೆ ಪರಿಹಾರ ನೀಡದ ರೈಲ್ವೆ ಇಲಾಖೆಗೆ ಸ್ಥಳೀಯ ನ್ಯಾಯಾಲಯವು ಬಿಸಿ ಮುಟ್ಟಿಸಿದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆದಿದೆ.     

ಹರಿಹರ-ಕೊಟ್ಟೂರು ರೈಲ್ವೆ ಮಾರ್ಗಕ್ಕೆ ರೈತರು  ಭೂಮಿ ನೀಡಿದ್ದು, ರೈಲ್ವೆ ಇಲಾಖೆ ರೈತರಿಗೆ 37 ಲಕ್ಷ ರೂಪಾಯಿ ನೀಡಬೇಕಿತ್ತು. ಆದರೆ ರೈಲ್ವೆ ಇಲಾಖೆ ಅಧಿಕಾರಿಗಳು ರೈತರಿಗೆ ಪರಿಹಾರ ಹಣ ಪಾವತಿಸಲಿರಲಿಲ್ಲ.

ರೈಲ್ವೇ ಇಲಾಖೆಯ ವಿಳಂಬ ನಿತಿಯಿಂದ ಬೇಸತ್ತ ರೈತರು ಕೋರ್ಟ್ ಮೊರೆ ಹೋಗಿದ್ದರು.

ಈ ಪ್ರಕರಣವನ್ನು ವಿಚಾರಣೆ ನಡೆಸಿದ ಹರಿಹರ ಪ್ರಧಾನ ಸಿವಿಲ್ ಕೋರ್ಟ್ ರೈಲು ಜಪ್ತಿಗೆ ಆದೇಶ  ನೀಡಿದೆ. ಬಳಿಕ ಕೋರ್ಟ್ ಸಿಬ್ಬಂದಿ  ಧಾರವಾಡ - ಮೈಸೂರು ಇಂಟರ್ ಸಿಟಿ ರೈಲನ್ನು ಜಪ್ತಿ  ಮಾಡಿದ್ದಾರೆ. ಕೋರ್ಟ್ ಕ್ರಮದಿಂದ, ರೈಲು ಸುಮಾರು ಹೊತ್ತು ಹರಿಹರ ನಿಲ್ದಾಣದಲ್ಲೇ ನಿಲ್ಲುವಂತಾಯಿತಲ್ಲದೇ, ಪ್ರಯಾಣಿಕರು ಪರದಾಡಬೇಕಾಯಿತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಪ್ಪಳದಲ್ಲಿ ಭೀಕರ ಅಪಘಾತ, ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ವನ್ಯಜೀವಿ-ಮಾನವ ಸಂಘರ್ಷ ಶಾಶ್ವತ ಪರಿಹಾರಕ್ಕೆ ಕ್ರಮ: ಸಚಿವ ಈಶ್ವರ್‌ ಖಂಡ್ರೆ