
ಬೆಂಗಳೂರು : ರೈತರ ಸಾಲಮನ್ನಾದಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿದ್ದು, ಇದರಿಂದ ಅನೇಕರು ನೆರವಿನ ಹಸ್ತ ಚಾಚುತ್ತಿದ್ದಾರೆ. ಇದೀಗ ಕಾರ್ಪೊರೇಟರ್ ಗಳು ತಮ್ಮ ಒಂದು ತಿಂಗಳ ಸಂಭಾವನೆಯನ್ನು ಸರ್ಕಾರಕ್ಕೆ ನೀಡಲು ನಿರ್ಧಾರ ಮಾಡಿದ್ದಾರೆ.
ರೈತರಿಂದಾಗಿಯೇ ಬೆಂಗಳೂರು ಬದುಕಿದೆ. ಹೀಗಾಗಿ ಒಟ್ಟು 198 ಕಾರ್ಪೋರೇಟರ್ ಗಳು ಒಂದು ತಿಂಗಳ ವೇತನವನ್ನು ಸಾಲಮನ್ನಾಕ್ಕಾಗಿ ನೀಡಲು ನಿರ್ಧಾರ ಮಾಡಿದ್ದಾರೆ.
ಇನ್ನು ವೈಯಕ್ತಿಕವಾಗಿ 1 ಲಕ್ಷ ರೂಪಾಯಿ ನೀಡುವುದಾಗಿ ಪದ್ಮನಾಭ ರೆಡ್ಡಿ ಘೊಷಿಸಿದ್ದಾರೆ. ತಮ್ಮ ಎರಡು ತಿಂಗಳ ಗೌರವ ಸಂಭಾವನೆ ನೀಡಲು ಮೇಯರ್ ಸಂಪತ್ ರಾಜ್ ಕೂಡ ನಿರ್ಧಾರ ಮಾಡಿದ್ದಾರೆ.
ಒಟ್ಟು ಕಾರ್ಪೊರೇಟರ್ ಗಳು ನೀಡುವ ಹಣವು 14.85 ಲಕ್ಷದಷ್ಟಾಗಲಿದ್ದು, ಮೇಯರ್ ಹಾಗೂ ವಿಪಕ್ಷ ನಾಯಕರು ನೀಡುವ ನೀಡುವ ಹಣ ಸೇರಿ 16 ಲಕ್ಷವನ್ನು ಸಾಲಮನ್ನಾಕ್ಕಾಗಿ ನೀಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.