
ನವದೆಹಲಿ : ಕಾಂಗ್ರೆಸ್ ಪಕ್ಷವು ತನ್ನ ವಕ್ತಾರೆ ಪ್ರಿಯಾಂಕ ಚತುರ್ವೇದಿಗೆ ಟ್ಯಾಗ್ ಮಾಡುವ ಟ್ವೀಟ್ ಒಂದನ್ನು ಪ್ರಿಯಾಂಕ ಚೋಪ್ರಾಗೆ ಟ್ಯಾಗ್ ಮಾಡಿರುವುದು ಇದೀಗ ವೈರಲ್ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಣ್ಣು ಪರೀಕ್ಷೇ ಲ್ಯಾಬ್ ತೆರೆಯುವುದಾಗಿ ಹೇಳಿ ಇದೀಗ ಮಣ್ಣು ಪರೀಕ್ಷೆ ಕೇಂದ್ರವನ್ನು ತೆರೆಯದೇ ರೈತರಿಗೆ ಸುಳ್ಳು ಹೇಳಿದೆ ಎಂದು ಟ್ವೀಟ್ ಮಾಡಿ ಬಳಿಕ ಆ ಟ್ವೀಟ್ ಅನ್ನು ಪ್ರಿಯಾಂಕ ಚೋಪ್ರಾಗೆ ಟ್ಯಾಗ್ ಮಾಡಿದೆ.
ಪಕ್ಷದ ವಕ್ತಾರೆ ಪ್ರಿಯಾಂಕ ಚತುರ್ವೇದಿಗೆ ಟ್ಯಾಗ್ ಮಾಡುವ ಬದಲು ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾಗೆ ಟ್ಯಾಗ್ ಮಾಡಿದೆ. ಕಾಂಗ್ರೆಸ್ ನ ಅಫಿಶಿಯಲ್ ಹ್ಯಾಂಡಲ್ ನಿಂದಲೇ ಈ ಟ್ವೀಟ್ ಮಾಡಿದ್ದು, ತಪ್ಪಿನ ಅರಿವಾಗುತ್ತಿದ್ದಂತೆ ಬಳಿಕ ಡಿಲೀಟ್ ಮಾಡಲಾಗಿದೆ.
ಮಣ್ಣಿನ ಗುಣಮಟ್ಟವನ್ನು ಅಳೆಯುವ ಸಲುವಾಗಿ ಮಣ್ಣು ಪರೀಕ್ಷಾ ಕೇಂದ್ರವನ್ನು ತೆರೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೇಳಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.