
ಮಾ ಸಾಯ್ (ಥಾಯ್ಲೆಂಡ್): ಗುಹೆಯಲ್ಲಿ ವಾರಗಟ್ಟಲೇ ಸಿಕ್ಕಿಹಾಕಿಕೊಂಡಿದ್ದ ಬಾಲಕರು ಅಪಾಯಕಾರಿ ನೀರಿನಾಳದ ರಕ್ಷಣೆಯ ವೇಳೆ ಆತಂಕಕ್ಕೆ ಒಳಗಾಗುವುದನ್ನು ತಡೆಯಲು ಕುದುರೆಗಳನ್ನು ನಿಸ್ತೇಜಗೊಳಿಸಲು ನೀಡಲಾಗುವ ಮಾದಕದ್ರವ್ಯವನ್ನು ನೀಡಲಾಗಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ.
ಮಕ್ಕಳಿಗೆ ಮಾದಕದ್ರವ್ಯ ನೀಡಿದ್ದನ್ನು ಅಧಿಕಾರಿಗಳು ಆರಂಭದಲ್ಲಿ ನಿರಾಕರಿಸಿದ್ದರು. ಆದರೆ, ಬಾಲಕರಿಗೆ ಕೆಟಾಮಿನ್ ಎಂಬ ಆತಂಕ ನಿವಾರಣಾ ದ್ರವ್ಯವನ್ನು ನೀಡಲಾಗಿತ್ತು ಎಂದು ಥಾಯ್ಲೆಂಡ್ ಪ್ರಧಾನಿ ಪ್ರಾಯಟ್ ಚಾನ್ ಒ ಚಾ ಖಚಿತಪಡಿಸಿದ್ದಾರೆ.
ಡ್ರಗ್ಸ್ ಸೇವಿಸಿದ್ದರಿಂದ ರಕ್ಷಣೆಯ ವೇಳೆ ಬಾಲಕರು ಪ್ರಜ್ಞಾಹೀನರಾಗಿದ್ದರು. ಅವರನ್ನು ಯಾವುದೇ ತೊಂದರೆ ಇಲ್ಲದೇ ಹೊರಗೆ ತರಲಾಯಿತು ಎಂದು ಡೈವರ್ಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.